Categories
ನೀರಾವರಿ ತಜ್ಞ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎನ್. ದೇಸಾಯಿ

ನಾಡಿನ ಹಲವು ನೀರಾವರಿ ಯೋಜನೆಗಳಿಗೆ ನಿರ್ದಿಷ್ಟ ರೂಪುರೇಷೆ ನೀಡಿದ ನೀರಾವರಿ ತಜ್ಞರು ಡಿ.ಎನ್‌. ದೇಸಾಯಿ ಅವರು.
ಏಕೀಕರಣದ ನಂತರ ಕರ್ನಾಟಕದಲ್ಲಿ ನಿರ್ಮಾಣಗೊಂಡ ತುಂಗಭದ್ರ, ಹಿಡ್ಕಲ್, ಹೇಮಾವತಿ, ವರಾಹಿ ಭೂಗತ ಜಲವಿದ್ಯುತ್‌ ಯೋಜನೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಡಿ. ಎನ್. ದೇಸಾಯಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಟಾನದಲ್ಲೂ ಸಕ್ರಿಯ ಪಾತ್ರವಹಿಸಿದರು. ಲೋಕೋಪಯೋಗಿ ಕಾರ್ಯದರ್ಶಿಗಳಾಗಿ ನಿವೃತ್ತರಾದ ನಂತರ ಆಲಮಟ್ಟಿ ಅಣೆಕಟ್ಟು ಕ್ರೈಸ್ಟ್ ಗೇಟ್ ವಿನ್ಯಾಸದ ತಜ್ಞರ ಸಮಿತಿ ಅಧ್ಯಕ್ಷರಾಗಿದ್ದ ಡಿ. ಎನ್. ದೇಸಾಯಿ ಅವರು ಪ್ರಸ್ತುತ ಕರ್ನಾಟಕ ನೀರಾವರಿ ನಿಗಮ ಹಾಗೂ ಜಲಭಾಗ್ಯ ನಿಗಮದ ನಿರ್ದೆಶಕರು.
ಈಗ ಕೃಷ್ಣಾ ಜಲ ವಿವಾದ ಕುರಿತ ಕರ್ನಾಟಕ ತಾಂತ್ರಿಕ ಸಮಿತಿಯ ಪ್ರಧಾನ ಸಲಹೆಗಾರರಾಗಿದ್ದಾರೆ ಡಿ. ಎನ್. ದೇಸಾಯಿ ಅವರು.