Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ದೊಡ್ಡಣ್ಣ

ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಗಳ ಪ್ರತಿಭಾವಂತ ನಟರಲ್ಲೊಬ್ಬರು ದೊಡ್ಡಣ್ಣ.
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ದೊಡ್ಡಣ್ಣ ನಾಟಕದ ಗೀಳು ಹಚ್ಚಿಕೊಂಡರು.
ಅನೇಕ ಹವ್ಯಾಸಿ ನಾಟಕಗಳಲ್ಲಿ ನಟಿಸಿದ ಶ್ರೀ ದೊಡ್ಡಣ್ಣ ಅಭಿನಯಿಸಿದ ಮೊದಲ ಚಿತ್ರ ‘ಕೂಡಿಬಾಳಿದರೆ ಸ್ವರ್ಗಸುಖ’.
ಹಾಸ್ಯನಟ, ಖಳನಾಯಕರಾಗಿ ವಿಶೇಷ ಗಮನ ಸೆಳೆದಿರುವ ಶ್ರೀ ದೊಡ್ಡಣ್ಣ ಕೆಲವು ಗಂಭೀರ ಪಾತ್ರಗಳಲ್ಲೂ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ.
ತಮ್ಮದೇ ಆದ ಅಭಿನಯ ಶೈಲಿಯನ್ನು ರೂಢಿಸಿಕೊಂಡಿರುವ ಶ್ರೀ ದೊಡ್ಡಣ್ಣ ಕಳೆದ ೨೫ ವರ್ಷಗಳಿಂದ ನಟಿಸಿರುವ ಚಿತ್ರಗಳು ೬೦೦ಕ್ಕೂ ಹೆಚ್ಚು.
‘ಟು, ಟುವ್ವ ಟುವ್ವ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕನಟ ಪ್ರಶಸ್ತಿ ಪಡೆದಿರುವ ಶ್ರೀ ದೊಡ್ಡಣ್ಣ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹತ್ತು ಹಲವು.