Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ನಾರಾಯಣ್

ಸಹಾಯಕ ನಿರ್ದೇಶಕರಾಗಿದ್ದು ನಿರ್ದೆಶಕರಾಗಿ, ನಾಯಕ ನಟರಾಗಿಯೂ ಯಶಸ್ಸು ಪಡೆದವರು ಶ್ರೀ ಎಸ್. ನಾರಾಯಣ್ ಅವರು.
ಭಾರ್ಗವ, ಎ. ಟಿ. ರಘು ಮೊದಲಾದವರಲ್ಲಿ ಅನುಭವ ಪಡೆದ ಶ್ರೀ ಎಸ್. ನಾರಾಯಣ್ ಮೊದಲು ನಿರ್ದೇಶಿಸಿದ ಚಿತ್ರ ‘ಚೈತ್ರದ ಪ್ರೇಮಾಂಜಲಿ’. ಈ ಚಿತ್ರದ ಅಪೂರ್ವ ಯಶಸ್ಸಿನ ನಂತರ ಎಸ್. ನಾರಾಯಣ್ ಅವರು ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಿವರಾಜಕುಮಾರ್ ಮೊದಲಾದ ನಾಯಕನಟರು ಅಭಿನಯಿಸಿದ ಚಿತ್ರಗಳನ್ನು ನಿರ್ದೆಶಿಸಿ ಪ್ರೇಕ್ಷಕರ ಹಾಗೂ ಉದ್ಯಮದ
ಗಮನ ಸೆಳೆದರು.
ಸಂಭಾಷಣೆ, ಚಿತ್ರಕತೆ, ಗೀತೆಗಳನ್ನು ರಚಿಸಿ ನಿರ್ದೇಶನ ಮಾಡುತ್ತಿದ್ದ ಶ್ರೀ ಎಸ್. ನಾರಾಯಣ್ ನಾಯಕ ನಟರಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಯಶ ಗಳಿಸಿದರು.
ಹಿರಿಯ ನಟರಿದ್ದ ಚಿತ್ರಗಳಿಗೆ ನಿರ್ದೇಶನ ಮಾಡಿ ಹೆಸರು ಮಾಡಿದ ಶ್ರೀ ಎಸ್. ನಾರಾಯಣ್ ಯುವ ಪ್ರತಿಭೆಗಳಿಗೆ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಿದರು. ಕೆಲವು ಚಿತ್ರಗಳನ್ನು ತಾವೇ ನಿರ್ಮಿಸಿದ ಶ್ರೀ ನಾರಾಯಣ್ ಬಹುಮುಖ ಪ್ರತಿಭೆಯ ಕಲಾವಿದ.