Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಎಸ್. ದ್ವಾರಕೀಶ್

ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕ ಹಾಗೂ ನಿರ್ದೆಶಕರಾಗಿ ಅನುಪಮ ಸೇವೆ ಸಲ್ಲಿಸಿದವರು ಕಲಾವಿದ ಶ್ರೀ ಬಿ. ಎಸ್. ದ್ವಾರಕೀಶ್ ಅವರು.
ಮೈಸೂರಿನಲ್ಲಿ ಆಟೋಮೊಬೈಲ್ ಇಂಜನಿಯರಿಂಗ್ ಡಿಪ್ಲೊಮಾ ಗಳಿಸಿ ಕುಟುಂಬ ಉದ್ಯೋಗವಾಗಿದ್ದ ಟೈರ್ ವ್ಯಾಪಾರವನ್ನು ಬಿಟ್ಟು ಶ್ರೀ ದ್ವಾರಕೀಶ್ ಅವರು ಚಿತ್ರರಂಗ ಪ್ರವೇಶಿಸಿದ್ದು ಸೋದರಮಾವ ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದ ‘ವೀರಸಂಕಲ್ಪ’ ಚಿತ್ರದಲ್ಲಿ ನಟಿಸುವುದರ ಮೂಲಕ. ನಲ್ವತ್ತು ವರ್ಷಗಳಲ್ಲಿ ೩೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ೪೫ ಚಿತ್ರಗಳನ್ನು ನಿರ್ಮಿಸಿ, ೨೫ ಚಿತ್ರಗಳನ್ನು ನಿರ್ದೆಶಿಸಿದವರು ಶ್ರೀ ದ್ವಾರಕೀಶ್.
‘ಮೇಯರ್ ಮುತ್ತಣ್ಣ’ದ ಮೂಲಕ ಚಿತ್ರ ನಿಲ್ದಾಣಕ್ಕೆ ಇಳಿದ ಶ್ರೀ ದ್ವಾರಕೀಶ್ ಹೊಸ ಪ್ರಯೋಗಗಳಿಂದ ಹೆಸರಾದವರು. ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೀ ದ್ವಾರಕೀಶ್ ಅವರು ಖ್ಯಾತ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ್ ಅವರನ್ನು ಕನ್ನಡಕ್ಕೆ ತಂದವರು.
ವಿದೇಶಗಳಲ್ಲಿ ಮೊಟ್ಟಮೊದಲು ಕನ್ನಡ ಚಿತ್ರ ಚಿತ್ರೀಕರಿಸಿದ ಕೀರ್ತಿಯೂ ಶ್ರೀ ದ್ವಾರಕೀಶ್ ಅವರದೇ.