Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶ್ರೀಪತಿ ಮಂಜನಬೈಲು

ಯಕ್ಷಗಾನದ ಸೆಳೆತದಿಂದ ಬಣ್ಣ ಹಚ್ಚಿ ನಾಟಕತಂಡ ಕಟ್ಟಿ ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಶ್ರೀಪತಿ ಮಂಜನಬೈಲು ಅವರು.
ಕರಾವಳಿಯಿಂದ (ದಕ್ಷಿಣ ಕನ್ನಡ) ನೌಕರಿಗಾಗಿ ಬೆಳಗಾವಿ ಸೇರಿದ ಶ್ರೀಪತಿ ಕನ್ನಡ ನಾಟಕಗಳಿಗೆ GINGS ಸೇರ: ಕದಂ ‘ರಂಗಸಂಪದ’ದ ಮೂಲಕ ಬೆಳಗಾವಿಯಲ್ಲಿ ಭದ್ರ ನೆಲೆ ಒದಗಿಸಿಕೊಟ್ಟವರು.
ಅನ್ಯಭಾಷಾ ನಾಟಕಗಳ ಮಧ್ಯೆ ಕನ್ನಡದ ಹೊಸ ಅಲೆಯ ನಾಟಕ ಆಡುವ ಛಾತಿ ತೋರಿ ಬೆಳಗಾವಿಯಲ್ಲಿ ರಂಗಸಂಪದ ನಾಟಕ ಸಂಸ್ಥೆ ಕಟ್ಟಿದ ಶ್ರೀಪತಿ ಅಭಿನಯಿಸಿದ ನಾಟಕಗಳು ೫೦ಕ್ಕೂ ಹೆಚ್ಚು. ೬೦ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿರುವ ಅವರು ಹೊರ ಊರುಗಳ ತಂಡಗಳಿಗೆ ಬೆಳಗಾವಿಯಲ್ಲಿ ನಾಟಕ ಪ್ರದರ್ಶನಕ್ಕೆ ಕೊಟ್ಟ ಅವಕಾಶಗಳೇ ಅಸಂಖ್ಯ.
ನೋವು ನಲಿವುಗಳ ನಡುವೆ ರಂಗಬದುಕಿನಲ್ಲಿ ನಿರಂತರ ಪಯಣದಲ್ಲಿರುವ ಶ್ರೀಪತಿ ಮಂಜನಬೈಲು ಅಪರೂಪದ ರಂಗಕರ್ಮಿ.