Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಡಾ. ಮಹೇಶ್ ಜೋಷಿ

ಶಕ್ತಿಶಾಲಿ ಸಂವಹನ ವಾಹಕಗಳಾದ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಲವಲವಿಕೆಯಿಂದ ಜನರ ಬಳಿಗೆ ತರುವಲ್ಲಿ ಯಶ ಕಂಡವರು ಡಾ. ಮಹೇಶ್ ಜೋಷಿ ಅವರು.
ಪ್ರಸಾರ ಭಾರತಿಯ ಪ್ರಾದೇಶಿಕ ವಾಹಿನಿಗಳಲ್ಲಿ ಕನ್ನಡದ ‘ಚಂದನ’ಕ್ಕೆ ಹೊಸ ರೂಪ ನೀಡಿ ದೇಶದ 2 ಅತ್ಯುತ್ತಮ ವಾಹಿನಿಯನ್ನಾಗಿ ಅಣಿಗೊಳಿಸಿದ ಡಾ. ಮಹೇಶ್ ಜೋಷಿ ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ೨೦೦೫ರ ಸಾಲಿನ ಶ್ರೇಷ್ಟ ಕೇಂದ್ರವೆಂಬ ಪ್ರಶಸ್ತಿ ತಂದುಕೊಟ್ಟವರಲ್ಲಿ ಪ್ರಮುಖರು.
ಕಾರ್ಮಿಕ ಕಾನೂನು, ಪತ್ರಿಕೋದ್ಯಮ, ಕೈಗಾರಿಕಾ ಸಮನ್ವಯ ಹೀಗೆ ನಾಲ್ಕಾರು ವಿಷಯಗಳಲ್ಲಿ ಸ್ನಾತಕ ಪದವಿ ಪಡೆದಿರುವ ಮಹೇಶ್ ಜೋಷಿ ಅವರು ಮಾನವ ಹಕ್ಕು ಹಾಗೂ ಮಾಧ್ಯಮ ಕುರಿತು ಸಿದ್ಧಪಡಿಸಿದ ಪ್ರೌಢಪ್ರಬಂಧಕ್ಕೆ ಅಮೇರಿಕಾ ವಿಶ್ವವಿದ್ಯಾನಿಲಯವೊಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದೂರದರ್ಶನವನ್ನು ಸಮೀಪದರ್ಶನವಾಗಿಸುವ ಧೈಯವಿಟ್ಟುಕೊಂಡ ಮಹೇಶ್ ಜೋಷಿ ನೇರಪ್ರಸಾರ, ನೇರ ಸಂವಾದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಜನತೆಯ ಸಮೀಪಕ್ಕೆ ದೂರದರ್ಶನವನ್ನು ಕೊಂಡೊಯ್ದಿದ್ದಾರೆ. ಬೆಂಗಳೂರು ದೂರದರ್ಶನದ ನಿರ್ದೆಶಕ ಡಾ. ಮಹೇಶ್ ಜೋಷಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಸಂಯೋಜಿಸಿದ್ದು ಅವರ ಪುರಸ್ಕಾರಗಳು ಹತ್ತು ಹಲವು.