Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀಮತಿ ರೇಖಾರಾವ್

ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಶ್ರೀಮತಿ ರೇಖಾರಾವ್‌ ಪ್ರಸಿದ್ಧ ಕಲಾವಿದರಾದ ಕೆ.ಕೆ. ಹೆಬ್ಬಾರ್ ಅವರ ಮಗಳು.
ತಂದೆಯವರಲ್ಲಿಯೇ ಚಿತ್ರಕಲೆ ಅಭ್ಯಾಸ ಮಾಡಿದ ಶ್ರೀಮತಿ ರೇಖಾರಾವ್ ೧೯೭೦ರ ದಶಕದಲ್ಲಿಯೇ ತಮ್ಮ ರಚನೆಗಳಿಂದ ಚಿತ್ರಾಸಕ್ತರ ಗಮನ ಸೆಳೆದರು.
ನವದೆಹಲಿ, ಮುಂಬೈ, ಬರೋಡ, ಜರ್ಮನಿ, ಅಮೇರಿಕಾ ದೇಶಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ಏರ್ಪಡಿಸಿರುವ ಶ್ರೀಮತಿ ರೇಖಾರಾವ್‌ ಅವರು ದೇಶದ ಹಲವು ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ.
ಲಲಿತಕಲಾ ಅಕಾಡಮಿ ಏರ್ಪಡಿಸಿದ್ದ ಪಂಡಿತ್ ನೆಹರೂ ಅವರಿಗೆ ಶ್ರದ್ದಾಂಜಲಿ, ಹೆಲ್ವೇಜ್ ಇಂಡಿಯಾ ಪ್ರದರ್ಶನ, ಮಕ್ಕಳ ರಕ್ಷಣೆ ಹೀಗೆ ಹಲವಾರು ಸಮಕಾಲೀನ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀಮತಿ ರೇಖಾರಾವ್‌ ಹಲವಾರು ಚಿತ್ರಕಲಾವಿದರ ಶಿಬಿರಗಳಲ್ಲಿ, ಕಾರಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ದೇಶವಿದೇಶಗಳ ಹಲವು ಗ್ಯಾಲರಿಗಳಲ್ಲಿ ಶ್ರೀಮತಿ ರೇಖಾರಾವ್ ಅವರ ಚಿತ್ರಕೃತಿ ಸಂಗ್ರಹವಿದೆ.