Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶಿ ಜೆ.ಎಂ.ಎಸ್. ಮಣಿ

ತಾವು ಅಭ್ಯಾಸ ಮಾಡಿದ ಶಾಲೆಗೆ ಇಂದು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಜೆ.ಎಂ.ಎಸ್‌. ಮಣಿ ಅವರು ನಾಡಿನ ಹಿರಿಯ ಚಿತ್ರಕಲಾವಿದರಲ್ಲೊಬ್ಬರು.
ಡ್ರಾಯಿಂಗ್ ಹಾಗೂ ಚಿತ್ರಕಲೆ ಡಿಪ್ಲೊಮಾ ತರಗತಿಗಳಲ್ಲಿ ಮೊದಲ ಬ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದ ಶ್ರೀ ಜೆ.ಎಂ.ಎಸ್. ಮಣಿ ಅವರು ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಪ್ರತಿಭಾವಂತ ವಿದ್ಯಾರ್ಥಿ ಎಂಬ ಬಹುಮಾನ ಪಡೆದವರು.
೧೯೭೯ರಿಂದ ದೇಶವಿದೇಶಗಳಲ್ಲಿ ಸತತವಾಗಿ ಏಕಕಲಾ ಪ್ರದರ್ಶನಗಳನ್ನು ನಡೆಸಿರುವ ಶ್ರೀ ಜೆ.ಎಂ.ಎಸ್. ಮಣಿ ಮ್ಯಾಂಚೆಸ್ಟರ್‌ನಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ಪಾಲ್ಗೊಂಡವರು.
ಕರ್ನಾಟಕ ಕಲಾಯಾತ್ರೆಯೂ ಸೇರಿದಂತೆ ಹಲವಾರು ಕಲಾ ಪ್ರದರ್ಶನಗಳಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿರುವ ಶ್ರೀ ಜೆ.ಎಂ.ಎಸ್. ಮಣಿ ಯವರು ಹತ್ತಾರು ಕಲಾಶಿಬಿರ ಹಾಗೂ ಕಾರಾಗಾರಗಳಲ್ಲಿ ಭಾಗವಹಿಸಿದ್ದಾರೆ.
ಅನೇಕ ಸರ್ಕಾರಿ ಗ್ಯಾಲರಿಗಳು ಹಾಗೂ ಖಾಸಗಿ ಸಂಗ್ರಹಗಳಲ್ಲಿ ಶ್ರೀ ಜೆ.ಎಂ.ಎಸ್. ಮಣಿ ಅವರ ಕೃತಿಗಳು ಪ್ರದರ್ಶನಕ್ಕಿದ್ದು ಪ್ರಸ್ತುತ ಅವರು ಕೆನ್ ಕಲಾಶಾಲೆಯ ಪ್ರಾಂಶುಪಾಲರಾಗಿದ್ದಾರೆ.