Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಹೆಚ್. ಮರಿದೇವರು

ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ ಸಾಧನೆ ಮಾಡುತ್ತಿರುವವರು ಪ್ರೊ. ಸಿ.ಹೆಚ್. ಮರಿದೇವರು ಅವರು.
೧೯೩೫ರಲ್ಲಿ ಜನಿಸಿದ ಪ್ರೊ. ಸಿ.ಹೆಚ್. ಮರಿದೇವರು ಅವರು. ಎಂ.ಎ., ಎಂ.ಎಡ್. ಪದವಿ ಪಡೆದು ಖಾದಿ ಮಂಡಳಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು.ನಂತರ ಪ್ರೌಡಶಾಲೆಯೊಂದರಲ್ಲಿ ಸಹಶಿಕ್ಷಕರಾಗಿ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕರಾಗಿ ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕವಿತೆಗಳು ಹುಟ್ಟಬೇಕು, ಶಬ್ದಪಾಕ (ಕವನ ಸಂಕಲನ) ಮಹಾಚೈತ್ರವನ್ನು ಕುರಿತು ವಿಮರ್ಶೆ, ಅಂಡಮಾನ್ ದ್ವೀಪದರ್ಶಿನಿ, ನೇಪಾಳ ಒಂದು ಭೂಸ್ವರ್ಗ, ಲಕ್ಷದ್ವೀಪಗಳಲ್ಲಿ ಮರಿದೇವರು (ಪ್ರವಾಸ ಸಾಹಿತ್ಯ), ಥಾಮಸ್ ಆಲ್ವ ಎಡಿಸನ್, ಡಾ. ಆಲ್ಬರ್ಟ್ ಐನ್ಸ್ಟಿನ್, ಡಾ. ಹೋಮಿ ಜಹಾಂಗೀರ್ ಬಾಬಾ (ಭಾಷಾಂತರಿಸಿದ ಕೃತಿಗಳು),ಶ್ರೀಯತರು ರಚಿಸಿದ ಪ್ರಮುಖ ಕೃತಿಗಳು. ಅಲ್ಲದೆ ಪ್ರೊ. ಸಿ.ಹೆಚ್. ಮರಿದೇವರು ಅವರಿಗೆ ಶಿಕ್ಷಣ ತತ್ವಶಾಸ್ತ್ರಕ್ಕೆ ಶ್ರೀ ದೇವರಾಜ ಬಹದ್ದೂರ್ ಪ್ರಶಸ್ತಿ, ಮುನ್ನಡೆದ ಶಿಕ್ಷಣ ಮನಶಾಸ್ತ್ರಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಶಬ್ದಪಾಕ ಕವನ ಸಂಕಲನಕ್ಕೆ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಲಭಿಸಿವೆ.
ಪ್ರೊ. ಸಿ.ಹೆಚ್. ಮರಿದೇವರು ತೆಂಗು ಬೆಳೆಗಾರರ ಸಂಘ ಸ್ಥಾಪಿಸಿ, ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿ, ತುಮಕೂರು ತಾಲ್ಲೂಕು ತೆಂಗು ಅಡಿಕೆ ಬೆಳೆಗಾರರ ಸಂಘ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ತು ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಸಿದ್ದಾರೆ.
ಅಧ್ಯಯನ, ಅಧ್ಯಾಪನ ಎರಡರಲ್ಲೂ ತೊಡಗಿಸಿಕೊಂಡಿರುವ ಚಿಂತನಶೀಲ ಬರಹಗಾರ ಶ್ರೀ ಸಿ.ಹೆಚ್. ಮರಿದೇವರು ಅವರು.