Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಬಸವರಾಜ ಬಿಸರಳ್ಳಿ

ಕೊಪ್ಪಳ ಜಿಲ್ಲೆಯವರಾದ ಬಸವರಾಜ ಬಿಸರಳ್ಳಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು. ಖಾದಿ ಪ್ರಚಾರ ನಿರತ
ಸಮಾಜಸೇವಕರು ಸಹ.
೧೯೨೭ರಲ್ಲಿ ಜನಿಸಿದ ಬಸವರಾಜ ಅವರು ಎಳವೆಯಲ್ಲೇ ಗಾಂಧಿ ಪ್ರಭಾವಕ್ಕೊಳಗಾದವರು. ಖಾದಿ ಬಟ್ಟೆ ಧರಿಸಿ ಗೆಳೆಯರೊಂದಿಗೆ ಪ್ರಭಾತಪೇರಿ ನಡೆಸಿ ಬಾಲ್ಯದಲ್ಲೇ ಬಂಧನಕ್ಕೊಳಗಾದವರು. ೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿ ೧೫ ದಿನ ಜೈಲುವಾಸ ಅನುಭವಿಸಿದ ದೇಶಪ್ರೇಮಿ. ೧೯೪೮ರಲ್ಲಿ ಬಿಸರಳ್ಳಿಯಲ್ಲಿ ಗಾಂಧೀಜಿಯವರ ಚಿತಾಭಸ್ಮವಿರಿಸಿ ಮೂರ್ತಿ ಸ್ಥಾಪಿಸಿದ ಹಿರಿಮೆ. ೧೦೦ ಚರಕ ತರಿಸಿ ಗಾಂಧೀಜಿ ಹೆಸರಲ್ಲಿ ಸಂಘ ಸ್ಥಾಪಿಸಿ ೧೦೦ ಮಂದಿ ಹೆಣ್ಣುಮಕ್ಕಳಿಗೆ ನೂಲು ತಯಾರಿಸುವ ತರಬೇತಿ ನೀಡಿದವರು. ಮೂವರು ದಲಿತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮುನ್ನೆಲೆಗೆ ತಂದವರು. ಗ್ರಾಮದಲ್ಲಿ ಮದ್ಯಪಾನ ಅಂಗಡಿ ಮುಚ್ಚಿಸಿ ಹರಿಜನರಿಗೆ ಹೊಟೇಲ್ ಪ್ರವೇಶ ಕಲ್ಪಿಸಿದವರು. ಸಾಹಿತ್ಯದಲ್ಲೂ ಕೃಷಿ ಮಾಡಿರುವ ಇವರು ೧೬ ಪುಸ್ತಕಗಳ ಲೇಖಕರು. ಇನ್ನು ೧೦ ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದ್ದು ಇಳಿವಯಸ್ಸಿನಲ್ಲೂ ಬತ್ತದ ಕ್ರಿಯಾಶೀಲತೆಗೆ ಸಾಕ್ಷಿ.