ಕರ್ನಾಟಕದ ಚಿತ್ರಕಲಾ ಪರಂಪರೆಯನ್ನು ಬೆಳಗಿದವರಲ್ಲಿ ಯು.ರಮೇಶ್ರಾವ್ ಪ್ರಮುಖರು. ವಿಶಿಷ್ಟ ಒಳನೋಟವುಳ್ಳ ಕಲಾಕೃತಿಗಳ ರಚನೆಯಲ್ಲಿ ಸಿದ್ಧಹಸ್ತರು.
೧೯೪೯ರಲ್ಲಿ ಉಡುಪಿಯಲ್ಲಿ ಜನಿಸಿದ ರಮೇಶ್ ರಾವ್ ಬಿ.ಎ ಪದವೀಧರರು. ಚಿತ್ರಕಲೆಯ ಬಗ್ಗೆ ತೀರದ ಮೋಹದಿಂದಾಗಿ ಕಲಾವಿದರಾಗಿ ರೂಪಗೊಂಡವರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾಪ್ರದರ್ಶನದಲ್ಲಿ ೮ ಬಾರಿ ಆಯ್ಕೆಯಾದ ಹಿರಿಮೆ.ಮೈಸೂರ್ ಆರ್ಟಕೌನ್ಸಿಲ್ ಸಂಸ್ಥಾಪಕ ಸದಸ್ಯರು. ರಾಜ್ಯ, ರಾಷ್ಟ್ರ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ನೋಡುಗರ ಮನಗೆದ್ದ ಹೆಗ್ಗಳಿಕೆ. ಉಡುಪಿಯಲ್ಲಿ ಎರಡು ಬಾರಿ ಏಕವ್ಯಕ್ತಿ ಕಲಾಪ್ರದರ್ಶನ ಕರ್ನಾಟಕ ಲಲಿತಕಲಾ ಅಕಾಡೆಮಿ, ಸರ್ಕಾರಿ ವಸ್ತುಸಂಗ್ರಹಾಲಯ, ಸಿಂಡಿಕೇಟ್ ಬ್ಯಾಂಕ್ ಹಾಗೂ ರಾಷ್ಟ್ರ-ಅಂತರಾಷ್ಟ್ರೀಯ ಕಲಾ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಸಾಧನೆಯ ಪ್ರತೀಕ. ಕಲಾವಿದ, ಕಲಾಶಿಕ್ಷಕ ಹಾಗೂ ಕಲಾಸಂಘಟಕರಾಗಿ ನಾಡಿಗೆ ಅಪೂರ್ವ ಸೇವೆ ಸಲ್ಲಿಸಿದ ರಮೇಶ್ ರಾವ್ ಕರ್ನಾಟಕ ಲಲಿತಕಲಾ ಅಕಾಡೆಮಿಯು ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಗೌರವಗಳಿಗೆ ಭಾಜನರಾದ ಕಲಾಚೇತನ.
Categories