Categories
ಚಿತ್ರಕಲೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಯು. ರಮೇಶ್‌ರಾವ್‌

ಕರ್ನಾಟಕದ ಚಿತ್ರಕಲಾ ಪರಂಪರೆಯನ್ನು ಬೆಳಗಿದವರಲ್ಲಿ ಯು.ರಮೇಶ್‌ರಾವ್ ಪ್ರಮುಖರು. ವಿಶಿಷ್ಟ ಒಳನೋಟವುಳ್ಳ ಕಲಾಕೃತಿಗಳ ರಚನೆಯಲ್ಲಿ ಸಿದ್ಧಹಸ್ತರು.
೧೯೪೯ರಲ್ಲಿ ಉಡುಪಿಯಲ್ಲಿ ಜನಿಸಿದ ರಮೇಶ್‌ ರಾವ್ ಬಿ.ಎ ಪದವೀಧರರು. ಚಿತ್ರಕಲೆಯ ಬಗ್ಗೆ ತೀರದ ಮೋಹದಿಂದಾಗಿ ಕಲಾವಿದರಾಗಿ ರೂಪಗೊಂಡವರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾಪ್ರದರ್ಶನದಲ್ಲಿ ೮ ಬಾರಿ ಆಯ್ಕೆಯಾದ ಹಿರಿಮೆ.ಮೈಸೂರ್ ಆರ್ಟಕೌನ್ಸಿಲ್ ಸಂಸ್ಥಾಪಕ ಸದಸ್ಯರು. ರಾಜ್ಯ, ರಾಷ್ಟ್ರ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ನೋಡುಗರ ಮನಗೆದ್ದ ಹೆಗ್ಗಳಿಕೆ. ಉಡುಪಿಯಲ್ಲಿ ಎರಡು ಬಾರಿ ಏಕವ್ಯಕ್ತಿ ಕಲಾಪ್ರದರ್ಶನ ಕರ್ನಾಟಕ ಲಲಿತಕಲಾ ಅಕಾಡೆಮಿ, ಸರ್ಕಾರಿ ವಸ್ತುಸಂಗ್ರಹಾಲಯ, ಸಿಂಡಿಕೇಟ್ ಬ್ಯಾಂಕ್ ಹಾಗೂ ರಾಷ್ಟ್ರ-ಅಂತರಾಷ್ಟ್ರೀಯ ಕಲಾ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಸಾಧನೆಯ ಪ್ರತೀಕ. ಕಲಾವಿದ, ಕಲಾಶಿಕ್ಷಕ ಹಾಗೂ ಕಲಾಸಂಘಟಕರಾಗಿ ನಾಡಿಗೆ ಅಪೂರ್ವ ಸೇವೆ ಸಲ್ಲಿಸಿದ ರಮೇಶ್ ರಾವ್ ಕರ್ನಾಟಕ ಲಲಿತಕಲಾ ಅಕಾಡೆಮಿಯು ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಗೌರವಗಳಿಗೆ ಭಾಜನರಾದ ಕಲಾಚೇತನ.