Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ವಿ.ಎ. ದೇಶಪಾಂಡೆ

ಶಿಲ್ಪಕಲೆಯಲ್ಲಿ ವೈವಿಧ್ಯಮಯ ಸಾಧನೆಗೈದ ವಿಶಿಷ್ಠ ಪ್ರತಿಭೆ ವ್ಯಾಸಮೂರ್ತಿ ಅನಂತರಾವ್‌ ದೇಶಪಾಂಡೆ, ನಾಡಿನ ಪ್ರತಿಷ್ಠಿತ ಸ್ಮಾರಕಗಳ ನಿರ್ಮಾಣದಲ್ಲಿ ಕಲಾಕೌಶಲ್ಯ ಮೆರೆದ ಕಲಾವಿದರು.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ದೇಶಪಾಂಡೆ ಅವರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೧ರಂದು. ಶಿಲ್ಪಕಲೆಯಲ್ಲಿ ಡಿಪ್ಲೋಮಾ, ಮೆಟಲ್ ಕ್ಯಾಸ್ಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದವರು ಬರೋಡಾದ ಎಂ.ಎಸ್. ವಿವಿಯಿಂದ ಮೆರಿಟ್ ಸ್ಕಾಲರ್‌ಪ್ ಪಡೆದ ದೇಶಪಾಂಡೆ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಬದುಕು ಆರಂಭಿಸಿದವರು. ಕಾವಾದಲ್ಲಿ ಡೀನ್ ಆಗಿರುವ ದೇಶಪಾಂಡೆ ವಿಶಿಷ್ಟ ಕಲಾಕೃತಿಗಳ ರಚನೆಯಲ್ಲಿ ಪಳಗಿದವರು.ಮೂರು ಬಾರಿ ಏಕವ್ಯಕ್ತಿ ಪ್ರದರ್ಶನ, ಐದು ಬಾರಿ ಸಮೂಹ ಪ್ರದರ್ಶನ ಮೈಸೂರಿನ ಬಾಬುಜಗನ್ ಜೀವನ್ ರಾಂರ ೯.೫ ಅಡಿಯ ಕಂಚಿನ ಪ್ರತಿಮೆ, ಸರ್ವಜ್ಞ ರಾಜೇಂದ್ರಸ್ವಾಮಿ ಮುಂತಾದ ಹಲವು ಸ್ಮಾರಕಗಳನ್ನು ರೂಪಿಸಿದವರು. ರಾಜ್ಯ ಮಾತ್ರವಲ್ಲದೆ, ಸ್ವೀಡನ್, ಜರ್ಮನಿಯಲ್ಲೂ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಹೆಮ್ಮೆ ತರುವ ವಿಚಾರ. ೧೭ಕ್ಕೂ ಹೆಚ್ಚು ಕಲಾಶಿಬಿರಗಳಲ್ಲಿ ಕಲಾಕೃತಿಗಳ ರಚನೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಅಖಿಲ ಭಾರತ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ ಸೊಸೈಟಿ, ಮೈಸೂರು ದಸರಾ ಕಲಾಪ್ರದರ್ಶನ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಗುಜರಾತ್ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳಿಂದ ಭೂಷಿತರಾದ ಪ್ರತಿಭೆ.