Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಂಜು ಭಾರ್ಗವಿ

ಒಂಬತ್ತನೇ ವರ್ಷದಲ್ಲೇ ನಾಟ್ಯರಂಗ ಪ್ರವೇಶಿಸಿದ ಮಿಂಚಿನ ಬಳ್ಳಿ ಮಂಜು ಭಾರ್ಗವಿ ತಮ್ಮ ಅವಿರತ ಸಾಧನೆಯಿಂದ ನಾಟ್ಯರಾಣಿ, ನಾಟ್ಯ ಮಯೂರಿ ಎನಿಸಿದ ವಿಶಿಷ್ಟ ಕಲಾವಿದೆ.
ಗುರು ವೆಂಪಟ್ಟಿ ಚಿನ್ನಸತ್ಯಂ ಅವರಿಂದ ಕೂಚಿಪುಡಿ ಕಲೆಯಲ್ಲಿ ಶಿಕ್ಷಣ ಪಡೆದ ಇವರು ಈ ವರೆಗೆ ಎರಡು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಶ್ರೀಲಂಕಾ, ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಇವರು ನೃತ್ಯದ ಕಂಪನ್ನು ಪ್ರಸರಿಸಿದ್ದಾರೆ.ದಕ್ಷಿಣ ಭಾರತದ ಚಲನಚಿತ್ರ ಕ್ಷೇತ್ರದಲ್ಲಿ ನೃತ್ಯನಟಿಯಾಗಿಯೂ ಹೆಸರು ಗಳಿಸಿರುವ ಮಂಜು ಭಾರ್ಗವಿಯವರು ತೆಲುಗು “ಶಂಕರಾಭರಣಮ್” ಚಿತ್ರದ ಅಭಿನಯದಿಂದ ಜನಮನ ಗೆದ್ದವರು. ಇವರ ಕಲಾಪ್ರತಿಭೆಗೆ ಸಂದ ಗೌರವ ಸಮ್ಮಾನಗಳು ಅರಸಿ ಬಂದ ಬಿರುದು, ಪ್ರಶಸ್ತಿಗಳು ನೂರಾರು.
ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಯುವ ಪ್ರತಿಭೆಗಳ ಮೂಲಕ ವಿಸ್ತರಿಸುವ ಹಂಬಲದೊಂದಿಗೆ ಕೂಚಿಪುಡಿ ಸಂಶೋಧನಾ ಕೇಂದ್ರವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಸದಾಶಯ ಹೊಂದಿರುವ ಅಪೂರ್ವ ಕಲಾವಿದೆ ಶ್ರೀಮತಿ ಮಂಜು ಭಾರ್ಗವಿ ಅವರು.