Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಸುಲ್ತಾನಚೀ ಜಗಳೂರು

ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಶ್ರೀಮತಿ ಸುಲ್ತಾನ್ ಬಿ, ನಾಟಿ ಔಷಧಿ ಕೊಡುವುದರಲ್ಲಿ ಸುತ್ತಮುತ್ತ ಹೆಸರುವಾಸಿ. ಚರ್ಮ ರೋಗ, ಹುಳುಕಡ್ಡಿ ಮತ್ತು ಇಸುಬಿಗೆ ತಾನೇ ಔಷಧಿ ತಯಾರಿಸಿ ಚಿಕಿತ್ಸೆ ನೀಡುವ ಸುಲಾನ್ ಬಿ ಯವರ ಖ್ಯಾತಿ ಈಗ ಆಂಧ್ರ, ತಮಿಳುನಾಡು, ಬೆಂಗಳೂರು ಹಾಗೂ ಮಂಗಳೂರಿನವರೆಗೂ ಹಚ್ಚಿದೆ.

ಶ್ರೀಮತಿ ಸುಲ್ತಾನ್ ಬಿ ಸೂಲಗಿತ್ತಿ ಕಾರ್ಯವನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ಹೆರಿಗೆ ಕಿಟ್ ಗಳನ್ನು ವಿತರಿಸಿ ಅಧೀಕೃತಗೊಳಿಸಲಾಗಿದ್ದು, ಎಲ್ಲ ಹೆರಿಗೆಗಳನ್ನು ಯಶಸ್ವಿಯಾಗಿಸಿದ ಹೆಗ್ಗಳಿಕೆ ಇವರದು.

ರೋಟರಿ ಕ್ಲಬ್‌, ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ ಹಾಗೂ ಗ್ರಾಮಪಂಚಾಯಿತಿಗಳು ಇವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿವೆ.