Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಂ.ಜೆ.ಬ್ರಹ್ಮಯ್ಯ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದವರಾದ ಎಂ.ಜೆ.ಬ್ರಹ್ಮಯ್ಯ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ದೇಶಪ್ರೇಮದ ಪ್ರತೀಕ. ನಾಡಸೇವೆಗಾಗಿ ಅಹರ್ನಿಶಿ ದುಡಿದವರು.
೧೯೩೮ರ ವಿದುರಾಶ್ವತ್ಥ ಧ್ವಜ ಸತ್ಯಾಗ್ರಹದ ದಟ್ಟ ಪ್ರಭಾವಳಿಯಲ್ಲಿ ಬೆಳೆದ ಬ್ರಹ್ಮಯ್ಯ ಅವರು ೧೯೪೭ರಲ್ಲಿ ‘ಮೈಸೂರು ಚಲೋ’ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯಾನಂತರ ಕಾಲದಲ್ಲಿ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾದವರು. ಗಾಂಧಿಮೌಲ್ಯಗಳ ನೆಲೆಯಲ್ಲೇ ಬದುಕು ಸಾಗಿಸಿದ ಬ್ರಹ್ಮಯ್ಯ ಅವರು ಆ ದೆಸೆಯಲ್ಲೇ ಈವರೆಗೂ ಅನೇಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು ಹೊಸ ಪೀಳಿಗೆಗೆ ಮಾದರಿಯಾಗಿರುವವರು.