Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎನ್.ಆರ್.ನಾರಾಯಣ ರಾವ್

ಹೋಟೆಲ್ ಉದ್ಯಮದಲ್ಲಿ ಯಶಸ್ಸಿನ ಮೈಲಿಗಲ್ಲು ಸ್ಥಾಪಿಸಿದ ನೇರಂಬಳ್ಳಿ ರಾಘವೇಂದ್ರ ನಾರಾಯಣ ರಾವ್ ಅವರ ಗೆಲುವಿನ ಗುಟ್ಟು ಇರುವುದು ಅವರ ಸರಳ ವ್ಯಕ್ತಿತ್ವ ಮತ್ತು ಉತ್ತಮ ಸಂಘಟನಾ ಕೌಶಲದಲ್ಲಿ.
ಕೋಟೇಶ್ವರದ ನೇರಂಬಳ್ಳಿಯಲ್ಲಿ ೧೯೨೭ರಲ್ಲಿ ಜನನ, ಮೆಟ್ರಿಕ್‌ವರೆಗೆ ವಿದ್ಯಾಭ್ಯಾಸ. ತಮ್ಮ ತಂದೆ ಎನ್.ರಾಘವೇಂದ್ರ ಆಚಾರ್ಯರು ಕೆ.ಆರ್.ನಗರದಲ್ಲಿ ನಡೆಸುತ್ತಿದ್ದ ಹೋಟೆಲು ಉದ್ಯಮಕ್ಕೆ ೧೯ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ.
೧೯೫೯ರಿಂದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದ ವಿಸ್ತರಣೆ. ಕಾಲಿಟ್ಟ ಕಡೆಯಲ್ಲೆಲ್ಲ ಯಶಸ್ಸು, ಕೀರ್ತಿ, ಐಶ್ವರ್ಯ ಪ್ರಾಪ್ತಿ.
ಸಮಾಜಮುಖಿ ವ್ಯಕ್ತಿತ್ವದ ನಾರಾಯಣ ರಾವ್ ಅವರು ತಮ್ಮ ೮೨ನೇ ವಯಸ್ಸಿನಲ್ಲೂ ಸಮಾಜಸೇವೆಯಲ್ಲಿ
ಲವಲವಿಕೆಯಿಂದಿರುವರು.
ಕೋಟೇಶ್ವರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಲ್ಲಿ ಅವರದು ಪ್ರಮುಖ ಪಾತ್ರ. ಗುರು ಮಠ ಸೋದೆಯಲ್ಲಿ ಗುರುಕುಲ ಪದ್ಧತಿಗೆ ನಾಂದಿ. ಮಠದ ಜೀರ್ಣೋದ್ಧಾರಕ್ಕೆ ಸಹಕಾರ. ಬದರಿ, ತಿರುಪತಿ, ಉಡುಪಿ ಮೊದಲಾದ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಕೊಠಡಿ ನಿರ್ಮಾಣಕ್ಕೆ ಧನಸಹಾಯ, ಎಲ್ಲವರ್ಗದ ದುರ್ಬಲರಿಗೆ ಹಣಕಾಸು ನೆರವು. ಅನೇಕಾರು ಸಾಹಿತಿಗಳಿಗೆ ಅವರ ಕೃತಿಗಳನ್ನು ಹೊರತರುವಲ್ಲಿ ನಾರಾಯಣ ರಾವ್ ಅವರು ನೀಡಿರುವ ಪ್ರೋತ್ಸಾಹ ಸ್ತುತ್ಯಾರ್ಹ.
ಕನ್ನಡ ನಾಡು-ನುಡಿ, ನೆಲ-ಜಲ, ಕಲೆ-ಸಂಸ್ಕೃತಿ ಕ್ಷೇತ್ರಗಳ ಸೇವೆಯಲ್ಲೂ ಮುಂಚೂಣಿಯಲ್ಲಿರುವವರು ಶ್ರೀ ಎನ್.ಆರ್.ನಾರಾಯಣ ರಾವ್ ಅವರು.