Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಮಹಾದೇವ ಶಿವಬಸಪ್ಪ ಪಟ್ಟಣ

ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾದೇವ ಶಿವಬಸಪ್ಪ ಪಟ್ಟಣ ಅವರು ಬೆಳಗಾವಿ ರಾಮದುರ್ಗದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಮೂಲಕ ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನರಾಗಿದ್ದರು. ರಾಮದುರ್ಗದಲ್ಲಿ ಅರಮನೆಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ದೊಡ್ಡ ದುರಂತವೇ ನಡೆದುಹೋದಾಗ ಮಹಾದೇವಪ್ಪನವರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತಾದರೂ ಅವರನ್ನು ಪೋಲಿಸರು ಬಂಧಿಸಲಾಗಲಿಲ್ಲ. ಭೂಗತರಾಗಿದ್ದುಕೊಂಡೇ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡ ಮಹಾದೇವಪ್ಪ ಎಸ್.ಪಟ್ಟಣ ಅವರು ಸಾರ್ವಜನಿಕ ಕ್ಷೇತ್ರದಲ್ಲಿಯೂ ದೊಡ್ಡ ಹೆಸರು ಮಾಡಿದವರು. ಶಾಸಕರಾಗಿಯೂ ಆಯ್ಕೆಯಾದ ಡಾ|| ಪಟ್ಟಣ ಅವರು ಜನಸಾಮಾನ್ಯರ ನಾಯಕರಾಗಿ ನೂರ ಆರು ವಸಂತಗಳನ್ನು ಬಾಳಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಮಹಾದೇವಪ್ಪನವರಿಗೆ