Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಹಫೀಜ್

ಅಬ್ದುಲ್ ಹಫೀಜ್ ಅವರು ನಾಡಿನ ಹಿರಿಯ ಪತ್ರಿಕಾ ಛಾಯಾಗ್ರಾಹಕರಲ್ಲೊಬ್ಬರು. ಹಿಂದೂ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ಛಾಯಾಗ್ರಾಹಕರಾಗಿದ್ದು ಅನೇಕ ಮಹತ್ವದ ಸಮಾರಂಭಗಳನ್ನು, ಘಟನೆಗಳನ್ನು ತಮ್ಮ ಕ್ಯಾಮೆರಾದಿಂದ ಸೆರೆ ಹಿಡಿದು ಓದುಗರಿಗೆ ಉಣಬಡಿಸಿದವರು.

ಫ್ರೆಂಟ್ ಲೈನ್, ಬಿಸಿನೆಸ್ ಲೈನ್ ಮೊದಲಾದ ಪತ್ರಿಕೆಗಳಿಗೂ ಛಾಯಾಚಿತ್ರಗಳನ್ನು ಒದಗಿಸಿರುವ ಅಬ್ದುಲ್ ಹಫೀಜ್ ನಿವೃತ್ತಿಯ ನಂತರ ಈಗಲೂ ಫ್ರೀಲ್ಯಾನ್ಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕಾರವೂ ಸೇರಿದಂತೆ ಹಲವು ಗೌರವಗಳು ದೊರೆತಿವೆ.