Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್. ಮಲ್ಲೇಶಯ್ಯ

ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿಯ ರಂಗಪ್ರತಿಭೆ ಶ್ರೀ ಎನ್. ಮಲ್ಲೇಶಯ್ಯ, ಕಳೆದ ಐದು ದಶಕಗಳಿಂದ ರಂಗಭೂಮಿಯ ಸೇವೆಯನ್ನು ಮಾಡುತ್ತ ಬಂದಿದ್ದಾರೆ. ಮಲ್ಲೇಶಯ್ಯನವರು ಪೌರಾಣಿಕ ನಾಟಕಗಳಲ್ಲಿ ಎತ್ತಿದ ಕೈ. ವಿಶೇಷವಾಗಿ ಇವರ ಶ್ರೀ ಕೃಷ್ಣಸಂಧಾನ ನಾಟಕದ ‘ಕೃಷ್ಣನ’ಪಾತ್ರ ಜನಪ್ರಿಯಗೊಂಡಿದ್ದು ನೂರಾರು ಬಾರಿ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಗೆ ಇವರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ದೊರೆತಿವೆ.
ಮೂಲತ: ರೈತ ಕುಟುಂಬದವರಾದ ಇವರು, ನಾಟಕದ ಜೊತೆ ಜೊತೆಯಲ್ಲಿ ದನಗಳ ಜಾತ್ರೆಯಲ್ಲಿ ಕೂಡ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.