Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎ. ನಾಗರಾಜ್

ಬೆಂಗಳೂರಿನ ಎ. ನಾಗರಾಜ್ ಅವರು ಕಡ್ಡಿ ತರಬೇತುದಾರರು. ಸುಮಾರು ಮೂರು ದಶಕಗಳ ಕಾಲದ ಕ್ರೀಡಾ ಜೀವನವನ್ನು ನಡೆಸಿರುವ ಇವರು ೨೨ ವರ್ಷಗಳ ಕಾಲ ಐ.ಟಿ.ಐ ಸಂಸ್ಥೆಯ ತಂಡವನ್ನು ತರಬೇತುಗೊಳಸಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸಿದ್ಧಗೊಳಿಸಿದ್ದಾರೆ. ಇವರಿಂದ ತಯಾರಾದ ಕಬ್ಬಡ್ಡಿ ಆಟಗಾರರು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ‘ಅರ್ಜುನ ಪ್ರಶಸ್ತಿ’ ಹಾಗೂ ‘ಏಕಲವ್ಯ ಪ್ರಶಸ್ತಿ’ಗಳನ್ನು ಪಡೆದುಕೊಂಡಿದ್ದಾರೆ. ಒಬ್ಬ ಕ್ರೀಡಾಗುರುವಾಗಿ ಸಾರ್ಥಕತೆಯನ್ನು ಕಂಡಿರುವ ಶ್ರೀ ನಾಗರಾಜು ಮಲೇಷ್ಯಾದಲ್ಲಿ ನಡೆದ ವಿಶ್ವಕಪ್ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ. ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಇವರದ್ದಾಗಿದೆ.