Categories
ಚಲನಚಿತ್ರ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೇವರಾಜ್

ಕನ್ನಡ ಚಲನಚಿತ್ರರಂಗದಲ್ಲಿ ಡೈನಾಮಿಕ್‌ ಹೀರೋ ಎಂದೇ ಖ್ಯಾತರಾದ ಹಿರಿಯ ನಟ ದೇವರಾಜ್, ೧೯೮೬ ರಲ್ಲಿ ಚಿತ್ರರಂಗ ಪ್ರವೇಶಿಸಿದ್ದು ೨೭ ಮಾವಳ್ಳಿ ಸರ್ಕಲ್‌ ಎನ್ನುವ ಚಿತ್ರದ ಮೂಲಕ.

ಮೂಲತ: ನಾಟಕರಂಗದಿಂದ ಬಂದವರಾದ ಇವರು, ಸ್ಪಂದನ ತಂಡ ಹಾಗೂ ಸಂಕೇತ್ ತಂಡದಲ್ಲಿ ತೊಡಗಿಸಿಕೊಂಡಿದ್ದರು. ಸರಿಸುಮಾರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಆಗಂತುಕ ಸಿನಿಮಾದಲ್ಲಿನ ಪಾತ್ರಕ್ಕಾಗಿ ರಾಜ್ಯಪ್ರಶಸ್ತಿ ಪಡೆದುಕೊಂಡರು. ಹಾಗೂ ಮತ್ತೊಂದು ಚಿತ್ರ ವೀರಪ್ಪನ್ ನಲ್ಲಿ ನಿರ್ವಹಿಸಿದ ಪಾತ್ರಕ್ಕೆ ಎರಡನೇ ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡರು.

ಲಾಕಪ್ ಡೆತ್,ಹುಲಿಯ, ಗೋಲಿಬಾರ್, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಪ್ರಚಂಡರಾವಣ ಇವರ ಪ್ರಮುಖ ಚಿತ್ರಗಳು