Categories
ರಾಜ್ಯೋತ್ಸವ 2018

ಶ್ರೀ ಕಲ್ಕನೆ ಕಾಮೇಗೌಡ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡರು ಆಧುನಿಕ ಭಗೀರಥರೆಂದೇ ಹೆಸರುವಾಸಿಯಾದ ಪರಿಸರಪ್ರೇಮಿ. ಅಂತರ್ಜಲವೃದ್ಧಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸದಾ ಮಾದರಿ. ೧೪ ಚೆಕ್ ಡ್ಯಾಂಗಳನ್ನು ನಿರ್ಮಿಸಿದ ಸಾಹಸಿ.
ಕಾಮೇಗೌಡರು ಶಾಲೆಯ ಹೊಸ್ತಿಲು ತುಳಿದವರಲ್ಲ, ಚಿಕ್ಕದೊಂದು ಮನೆ, ಕಿರುಭೂಮಿ ಹಾಗೂ ಒಂದಷ್ಟು ಕುರಿ ಮಂದೆಯೇ ಆಸ್ತಿ. ಆದರೆ, ಪರಿಸರಪ್ರೇಮ ಮಾತ್ರ ಬೆಟ್ಟದಷ್ಟು, ಕುಂದೂರು ಬೆಟ್ಟದ ಪೂರ್ವದಂಚಿನ ತಳತುದಿಯಲ್ಲಿ ಹಕ್ಕಿ, ಪಕ್ಷಿ, ಜನಜಾನುವಾರುಗಳಿಗಾಗಿ ಬರೋಬ್ಬರಿ ಹದಿನಾಲ್ಕು ಚೆಕ್ ಡ್ಯಾಂಗಳನ್ನು ನಿರ್ಮಿಸಿ ಮಳೆನೀರು ಇಂಗಿಸಿ ಜೀವರಾಶಿಗಳಿಗೆ ಮರುಜೀವ ನೀಡಿದವರು. ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದವರು. ಸಮಾಜಸೇವೆಯೇ ದೇಶಸೇವೆಯೆಂಬ ಭಾವದ ಕಾಮೇಗೌಡರು ಅಪ್ಪಟ ಕಾಯಕಯೋಗಿ, ನಿತ್ಯ ಸಸಿಗಳಿಗೆ ನೀರೆರೆಯುವುದು, ಒಂದಲ್ಲ ಒಂದು ಗಿಡ ನೆಡುವುದು ಕಾಮೇಗೌಡರ ದಿನಚರಿ, ಅರವತ್ತು ವರ್ಷಗಳಿಂದಲೂ ಯಾರ ನೆರವಿಲ್ಲದೆ ಕೆರೆಕಟ್ಟೆ ಸಂರಕ್ಷಣೆ ಮಾಡಿರುವ ಕಾಮೇಗೌಡರು ಪರಿಸರ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿರುವ ಆಧುನಿಕ ಭಗೀರಥರೇ ಸರಿ.