Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ

– ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ೧೯೬೪ರಲ್ಲಿ ಜನಸಿದ ಕೃಷ್ಣಮೂರ್ತಿಯವರು ಕಲಾವಿದರ-ಸಾಹಿತ್ಯ ಪ್ರಿಯರ ಮನೆತನದಿಂದ ಬಂದವರು. ತಂದೆ ಬಿ.ಎಸ್. ನಾರಯಣಭಟ್ ಸಾಹಿತ್ಯ ಪ್ರಿಯರು.
ಬಿ.ಕಾಂ. ಪಧವೀಧರರಾಗಿ ಅನಂತರ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಧವಿಗಳಿಸಿ ಸಂಗೀತದಲ್ಲೂ ಆಸಕ್ತಿ ಬೆಳಸಿಕೊಂಡು ಡಾ. ಕೆ. ವರದರಂಗನ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಸಿಸಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲೂ ಸಾಕಷ್ಟು ಕೃಷಿಮಾಡಿ ಮುಂದೆ ಸುಗಮ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಡಾ. ಎಸ್. ಕರೀಂಖಾನ್ ಅವರ ಬಳಿ ಸಾಕಷ್ಟು ವರ್ಷ ಶಿಷ್ಯವೃತ್ತಿ ಮಾಡಿದ್ದಾರೆ. ಜೊತೆಗೆ ಸುಗಮ ಸಂಗೀತದ ಕುರಿತು ಹೆಚ್ಚಿನ ಅಧ್ಯಯನವನ್ನೂ ಮಾಡಿದ್ದಾರೆ.
ರಂಗಭೂಮಿಯಲ್ಲೂ ಸಾಕಷ್ಟು ಕೃಷಿಮಾಡಿ ನಟರಾಗಿ, ನಿರ್ದೇಕರಾಗಿ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಸೇವೆಸಲ್ಲಿಸಿದ್ದಾರೆ.ಚಲನಚಿತ್ರಗಳಲ್ಲೂ ತಮ್ಮ ಪ್ರತಿಭೆ ಬೆಳಗಿಸಿ ಕೆಲವೊಂದು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ತಮ್ಮದೇ ಆದ ಆದರ್ಶ ಸುಗಮ ಸಂಗೀತ ಆಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಕೃಷ್ಣಮೂರ್ತಿಯವರಿಗೆ ಕಾಳಿಂಗ ರಾವ್ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾಗಿ ಹಲವಾರು ಪ್ರಶಸ್ತಿ ಗೌರವಗಳು ಅವರನ್ನು ಅರಿಸಿ ಬಂದಿವೆ ಆನೇಕ ಧ್ವನಿಸುರುಳಿಗಳನ್ನು ಹೊರತಂದಿರುವ ಕೃಷ್ಣಮೂರ್ತಿಯವರು ಸುಗಮ ಸಂಗೀತ ಕ್ಷೇತ್ರದ ಒಂದು ದೊಡ್ಡ ಆಸ್ತಿ.