Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಕೇವಲಚಂದ್ ಜೈನ್

ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡವರು ಕೇವಲ್ ಚಂದ್ ಜೈನ್ ಅವರು.
ಕಳೆದ ೫೦ ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯಮಿಯಾಗಿ ನೆಲೆಸಿರುವ ಅವರು ಸ್ಥಾಪಿಸಿರುವ ಸಂಸ್ಥೆಗಳು ಹತ್ತು-ಹಲವು. ಶ್ರೀಯುತರು ಕಾಲಿಟ್ಟ ಕ್ಷೇತ್ರದಲ್ಲೆಲ್ಲ ಯಶ ಕಂಡವರು.
ಮಹಾವೀರ ಜೈನ್ ಟ್ರಸ್ಟ್ ಸಂಸ್ಥಾಪಕರಾಗಿ ಅದರ ಮೂಲಕ ಮಹಾವೀರ ಸ್ಮಾರಕ ಆಸ್ಪತ್ರೆ ನಿರ್ವಹಣೆ, ಭಗವಾನ್ ಮಹಾವೀರ್ ಜೈನ್ ನೇತ್ರಾಲಯದ ಮೂಲಕ ದೀನರಿಗೆ ಚಿಕಿತ್ಸೆ, ಜೈನ್ ವಿದ್ಯಾಲಯ ಮತ್ತು ಕಾಲೇಜು ಮೂಲಕ ಶಿಕ್ಷಣ ನೀಡುತ್ತಿರುವರು.
ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಕೇವಲ್ ಚಂದ್ ಅವರು ಹಲವು ಲೇಖನಗಳನ್ನು ಬರೆದಿರುವರು. ‘ಸರ್ವ ಧರ್ಮ’ ಕೃತಿಯ ಮೂಲಕ ದೇಶಕ್ಕೆ ‘ಜಗತ್ ಮೇ ಧರ್ಮ ಸರ್ವೋಪಾಹಾರಿ’, ‘ಜೀವನ ಮತ್ತು ಧರ್ಮ’ ಹಾಗೂ ‘ಜೀವನ ದರ್ಪಣ’ ತತ್ವಸಂದೇಶ ನೀಡಿದ ಹಿರಿಮೆ ಅವರದು.
ಶ್ರೀಯುತರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಸಮಾಜ ಭೂಷಣ’ ಮತ್ತು ‘ಜ್ಞಾನ ರತ್ನ’ ಪ್ರಶಸ್ತಿಗಳನ್ನು
ಪಡೆದಿರುವರು.
ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ದೀನರ ಬಗ್ಗೆ ಅಪಾರ ಕಾಳಜಿ ಹೊಂದಿ ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಶ್ರೀ ಕೇವಲ್ ಚಂದ್ ಜೈನ್.