Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸುಕನ್ಯಾ ಮಾರುತಿ

ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಸುಕನ್ಯಾ ಮಾರುತಿ ಹೆಸರಾಂತ ಕವಿಯಿತ್ರಿ. ಪಂಚಾಗ್ನಿ ಮಧ್ಯೆ, ನಾನು-ನನ್ನವರು ಹಾಗೂ ತಾಜಮಹಲಿನ ಹಾಡು, ಅವರ ಕವನ ಸಂಕಲನಗಳು. ಹಲವಾರು ಗ್ರಂಥಗಳನ್ನು ಸಂಪಾದಿಸಿರುವ ಸುಕನ್ಯಾ ಅವರ ಪ್ರಯಾಣಿನಿ ಮತ್ತು ಸಂಕೃತಿ ಕೃತಿಗಳು ಖ್ಯಾತಿ ಪಡೆದಿವೆ.
ನಿರ್ಲಕ್ಷಿತ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಸುಕನ್ಯಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಜನಪರ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು ಉತ್ತಮ ವಾಗಿ ಎಂದು ಸಹ ಖ್ಯಾತರು. ರಾಜ್ಯ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಅನೇಕ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.