Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಖಲೀಲ್ ಉರ್ ರೆಹಮಾನ್

ಆಧುನಿಕ ಉರ್ದು ಕವಿ ಹಾಗೂ ಉತ್ತಮ ಭಾಷಾಂತರಕಾರರು ಶ್ರೀ ಖಲೀಲ್ ಉ ರೆಹಮಾನ್ ಅವರು.
ಬೆಂಗಳೂರಿನಲ್ಲಿ ೧೯೪೮ರಲ್ಲಿ ಜನನ. ಕಳೆದ ೩೦ ವರ್ಷಗಳಿಂದ ಉರ್ದು ಭಾಷೆ ಮತ್ತು ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಶ್ರೀ ಖಲೀಲ್ ಉರ್ ರೆಹಮಾನ್ ಅವರ ಕಾವ್ಯನಾಮ ಖಲೀಲ್ ಮೆಮೂನ್. ಶ್ರೀಯುತರ ಕವನಗಳು ಭಾರತ ಮತ್ತು ವಿದೇಶದ ಹಲವು ಉರ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಹಿಂದಿ, ಮೊದಲಾದ ಭಾಷೆಗಳಿಂದ ಹಲವಾರು ಕವನಗಳು ಹಾಗೂ ಪ್ರಬಂಧಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ‘ಲಿಸಾನ್ ಫಾಲೈಪ್ ಕೆ ಐನೆ ಮೇನ್’, ‘ಕನ್ನಡ ಆದಾಬ್, ‘ಉನೀಸ್ ಲೈಲಾಹಿ ನಾಮೆನ್’, ‘ನಿಶಾತ್ ಇ-ಗಮ್’ ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡೆಮಿ ಸದಸ್ಯರಾಗಿ ಎರಡು ಬಾರಿ ಸೇವೆ ಸಲ್ಲಿಸಿರುವ ಶ್ರೀಯುತರು ಆಕಾಶವಾಣಿ, ದೆಹಲಿ ಹಾಗೂ ಬೆಂಗಳೂರು ಕೇಂದ್ರಗಳಿಗೂ ಹಲವಾರು ನಾಟಕಗಳನ್ನು ಬರೆದಿದ್ದಾರೆ. ‘ಆದಾಬ್’ ತ್ರೈಮಾಸಿಕ ಪತ್ರಿಕೆಯ ಸಂಪಾದಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯರಾಗಿ, ಉತ್ತಮ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಉರ್ದು ಸಾಹಿತ್ಯದ ವಿದ್ವಾಂಸರೂ ಹಾಗೂ ದೇಶದಲ್ಲಿ ಉರ್ದು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿರುವವರು ಶ್ರೀ ಖಲೀಲ್ ಉರ್ ರೆಹಮಾನ್ ಅವರು.