Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುಲಿಂಗಪ್ಪ ಮೇಲ್ಗೊಡ್ಡಿ

ಸಾವಯವ ಕೃಷಿಯನ್ನು ಕಳೆದ ೨೧ ವರ್ಷಗಳಿಂದ ಮಾಡುತ್ತಾ ಬಂದಿರುವ ಶ್ರೀ ಗುರುಲಿಂಗಪ್ಪ ಮೇಲೊಡ್ಡಿ, ತೊಗರಿ ಬೆಳೆಯಲ್ಲಿ ವಿನೂತನ ಪದ್ಧತಿಯಾದ ನಾಟಪದ್ಧತಿ ಅಳವಡಿಸಿಕೊಂಡು ದಾಖಲೆ ಇಳುವರಿ ಪಡೆದಿದ್ದಾರೆ. ಸಾವಯವ ಬೆಳೆಯ ಬೆಲ್ಲ, ತರಕಾರಿ, ಹಣ್ಣು ಇತ್ಯಾದಿಗಳನ್ನು ಬೆಳೆದು ಸಂಸ್ಕರಿಸಿ ಬಳಕೆದಾರರಿಗೆ ಪೂರೈಸುತ್ತಿದ್ದಾರೆ.

ತಮ್ಮಂತೆಯೇ ಸಾವಯವ ಕೃಷಿ ಮಾಡಿ ಯಶ ಕಾಣಲಿ ಎನ್ನುವ ಸಹಕಾರ ಮನೋಭಾವದಲ್ಲಿ ಇವರು ತಮ್ಮ ಜ್ಞಾನ ಹಾಗೂ ಅನುಭವಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದ ಇತರ ರೈತರಿಗೆ ತಿಳಿಸಿಕೊಡುತ್ತಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಕೃಷಿ ಇಲಾಖೆಯು ಸಾವಯವ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹಲವು ಪ್ರಶಸ್ತಿಗಳು, ಪ್ರಯೋಗಶೀಲ ಕಿಸಾನ್ ಪ್ರಶಸ್ತಿಯನ್ನು ಗುಜರಾತ್ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದಲೂ ಪಡೆದಿದ್ದಾರೆ. ಹಲವು ಕೃಷಿ ಮತ್ತು ವಸ್ತುಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.