ಶ್ರೀ ಗೋಪಾಲ ಆಚಾರ್ಯ ಹಿರಿಯ ಯಕ್ಷಗಾನ ಪ್ರತಿಭೆ, ಇವರ ಹುಟ್ಟೂರು ತೀರ್ಥಹಳ್ಳಿ. ಸುಮಾರು ೫೫ ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು, ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಗಳಲ್ಲಿ ಒಬ್ಬರು. ಇವರ ಬಬ್ರುವಾಹನ, ಲವ-ಕುಶ, ಲಕ್ಷಣ, ಅಭಿಮನ್ಯು ಪಾತ್ರಗಳು ಹೆಸರುವಾಸಿಯಾಗಿವೆ.
ಯಕ್ಷಗಾನದಲ್ಲಿ ಹಲವಾರು ಅನುವಾದ, ನಿಘಂಟು ರಚನೆ, ವೇಷಗಳನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಯಕ್ಷಗಾನದ ಬಗ್ಗೆ ಅರಿವನ್ನು ಮೂಡಿಸಿದ್ದಾರೆ. ತಮ್ಮ ಯಕ್ಷಗಾನ ರಸದೌತಣವನ್ನು ಮಸ್ಕತ್ನಲ್ಲಿಯೂ ಕೂಡ ಉಣಬಡಿಸಿ, ಬಡಗುತಿಟ್ಟಿನ ನಿಜವೈಭವ ವಿಜೃಂಭಿಸುವಂತೆ ಮಾಡಿದ್ದಾರೆ.
ಐದು ದಶಕಗಳ ಕಾಲ ಯಕ್ಷಕಲೆಯನ್ನು ಉಳಿಸಿಕೊಂಡು, ಇಳಿವಯಸ್ಸಿನಲ್ಲೂ ಕಲಾಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಪ್ರಶಸ್ತಿಗಳು ಸನ್ಮಾನಗಳು ಅವರನ್ನು ಹುಡುಕಿ ಬಂದಿವೆ.
Categories