Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸೇನೆ

ಶ್ರೀ ನವೀನ್ ನಾಗಪ್ಪ

ಕ್ಯಾಪ್ಟನ್ ನವೀನ್ ನಾಗಪ್ಪ, ಭಾರತೀಯ ಸೇನೆಯ ದಿಟ್ಟ ಹೋರಾಟಗಾರ, ಕಾರ್ಗಿಲ್ ಯುದ್ಧದಲ್ಲಿ ಎದೆಗುಂದದೆ ಹೋರಾಟ ನಡೆಸಿ ವೈರಿಗಳನ್ನು ಮಣಿಸುವ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯಲ್ಲಿ, ೬೦ ಗಂಟೆಗಳ ಕಾಲ ತೀವ್ರ ಸಂಕಟ ಅನುಭವಿಸಿದರು. ಕಾರ್ಗಿಲ್ ಯುದ್ಧದ ಕೊನೆಯಲ್ಲಿ ತೀವ್ರವಾಗಿ ಗಾಯಗೊಂಡ ಶ್ರೀ ನವೀನ್ ನಾಗಪ್ಪ, ಪರಿಣಾಮವಾಗಿ ೨೧ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸೇನೆಗೆ ಅರ್ಹರಲ್ಲವೆಂದ ಬಳಿಕ ತಾಯ್ಯಾಡಿಗೆ ಮರಳಿದರು. ಕಾರ್ಗಿಲ್ ಯುದ್ಧದಲ್ಲಿನ ಅವರ ಧೈರ್ಯ ಶೌರ್ಯಗಳನ್ನ
ಪ್ರಶಂಸಿಸಿ ಅವರಿಗೆ ‘ಸೇನಾ ಮೇಡಲ್’ ಪ್ರದಾನ ಮಾಡಲಾಗಿದೆ.