Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸೇನೆ

ಶ್ರೀ ನವೀನ್ ನಾಗಪ್ಪ

ಕ್ಯಾಪ್ಟನ್ ನವೀನ್ ನಾಗಪ್ಪ, ಭಾರತೀಯ ಸೇನೆಯ ದಿಟ್ಟ ಹೋರಾಟಗಾರ, ಕಾರ್ಗಿಲ್ ಯುದ್ಧದಲ್ಲಿ ಎದೆಗುಂದದೆ ಹೋರಾಟ ನಡೆಸಿ ವೈರಿಗಳನ್ನು ಮಣಿಸುವ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯಲ್ಲಿ, ೬೦ ಗಂಟೆಗಳ ಕಾಲ ತೀವ್ರ ಸಂಕಟ ಅನುಭವಿಸಿದರು. ಕಾರ್ಗಿಲ್ ಯುದ್ಧದ ಕೊನೆಯಲ್ಲಿ ತೀವ್ರವಾಗಿ ಗಾಯಗೊಂಡ ಶ್ರೀ ನವೀನ್ ನಾಗಪ್ಪ, ಪರಿಣಾಮವಾಗಿ ೨೧ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸೇನೆಗೆ ಅರ್ಹರಲ್ಲವೆಂದ ಬಳಿಕ ತಾಯ್ಯಾಡಿಗೆ ಮರಳಿದರು. ಕಾರ್ಗಿಲ್ ಯುದ್ಧದಲ್ಲಿನ ಅವರ ಧೈರ್ಯ ಶೌರ್ಯಗಳನ್ನ
ಪ್ರಶಂಸಿಸಿ ಅವರಿಗೆ ‘ಸೇನಾ ಮೇಡಲ್’ ಪ್ರದಾನ ಮಾಡಲಾಗಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸೇನೆ

ಸುಬೇದಾ‌ರ್ ಶ್ರೀ ಬಿ.ಕೆ.ಕುಮಾರಸ್ವಾಮಿ

ಭಾರತೀಯ ಸೈನ್ಯದ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ದೇಶಸೇವೆಗೈದ ವೀರಯೋಧ ಸುಬೇದಾ‌ರ್ ಕುಮಾರಸ್ವಾಮಿ, ಗ‍ಡಿಬೇಲಿ ರಚಿಸಲು ನೆರವಾದ ದೇಶಪ್ರೇಮಿ. ಬೆಂಗಳೂರಿನಲ್ಲಿ ೧೯೬೨ರಲ್ಲಿ ಜನಿಸಿದ ಬಿ.ಕೆ.ಕುಮಾರಸ್ವಾಮಿ ೧೮ನೇ ವಯಸ್ಸಿಗೆ ಭಾರತೀಯ ಸೇನೆಗೆ ಸೇರಿದವರು. ಸಿಪಾಯಿಯಾಗಿ ಆಪರೇಷನ್‌ ಬ್ಲೂಸ್ಟಾರ್, ಆಪರೇಷನ್ ರಕ್ಷಕ್, ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ್ ಮತ್ತು ಎಲ್‌ಸಿ ಫೆನ್ಸಿಂಗ್‌ನಂತಹ ಪ್ರಮುಖ ಕಾರ್ಯಾಚರಣೆಯಲ್ಲಿ ನಾಡಿಗಾಗಿ ಹೋರಾಡಿದವರು. ಕಬಡ್ಡಿ ಮತ್ತು ವೇಟ್‌ಲಿಫ್ಟಿಂಗ್ ಆಟಗಾರರಾಗಿ, ಭಾರತೀಯ ರಾಷ್ಟ್ರೀಯ ಕಬಡ್ಡಿ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದವರು. ೧೯೮೧ರಿಂದ ೮೩ರವರೆಗೆ ಬಾಕ್ಸಿಂಗ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ ಹ್ಯಾಟ್ರಿಕ್ ದಾಖಲೆ. ಭಯೋತ್ಪಾದನೆಗೆ ಸುಲಭ ಪ್ರವೇಶ ನಿರ್ಬಂಧಿಸುವ ಗಡಿಪ್ರದೇಶದ ಬೇಲಿ ರಚಿಸಲು ಉಪಕ್ರಮ ಕೈಗೊಂಡು ಪ್ರಶಸ್ತಿಗೆ ಪಾತ್ರರಾದವರು. ನಿವೃತ್ತಿ ನಂತರವೂ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ, ಎನ್‌ಸಿಸಿ ಕೆಡೆಟ್‌ ಸಮಿತಿಯ ಗೌರವಾಧ್ಯಕ್ಷರಾಗಿ ಸೇವಾನಿರತರು. ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಲೇ ಬಡಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾದ ಕುಮಾರಸ್ವಾಮಿ ಕೆ.ಎಂ.ಕಾರಿಯಪ್ಪ ಪ್ರಶಸ್ತಿ, ಜಯಕರ್ನಾಟಕ ಸಾಧನ ಪ್ರಶಸ್ತಿಗಳಿಂದ ಭೂಷಿತರು.