Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಚನ್ನಬಸಪ್ಪ ಕುಳಗೇರಿ

ಹೈದರಾಬಾದ್ ವಿಮೋಚನಾ ಚಳುವಳಿಯ ಸಕ್ರಿಯ ಕಾರ್ಯಕರ್ತ ಶ್ರೀ ಕೆ. ಚೆನ್ನಬಸಪ್ಪ ಕುಳಗೇರಿ,
ಇಂಟರ್ಮೀಡಿಯೆಟ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಕಾಲೇಜು ಬಹಿಷ್ಕರಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ವಿದ್ಯಾಭ್ಯಾಸವನ್ನೇ ತ್ಯಜಿಸಿದವರು. ಮುಂದೆ ಹೈದರಾಬಾದ್ ಸಂಸ್ಥಾನದ ವಿಮೋಚನೆಗಾಗಿ ಭೂಗತ ಹೋರಾಟದಲ್ಲಿ ತೊಡಗಿದವರು. ಸ್ವಾತಂತ್ರ್ಯದ ನಂತರ ಸೇವಾ ಸಹಕಾರ ಸಂಘಗಳನ್ನು ಸ್ಥಾಪಿಸಿ ಜನರ ಸಮಸ್ಯೆಗಳಿಗೆ, ಶಿಕ್ಷಣಕ್ಕೆ ಸ್ಪಂದಿಸಿದ ಧೀಮಂತ ನಾಯಕ ಶ್ರೀ ಕುಳಗೇರಿ ಅವರು. ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಜೇವರ್ಗಿ ತಾಲ್ಲೂಕು ಕಾಂಗ್ರೆಸ್ನ ಮೊದಲ ಅಧ್ಯಕ್ಷರಾಗಿ ಜಿಲ್ಲಾ ಜನತಾಪಕ್ಷ, ಜನತಾದಳಗಳ ಅಧ್ಯಕ್ಷರಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ರೈತರ ಪರವಾಗಿ ಹೋರಾಡಿದವರು.
೭೮ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ತೊಡಗಿರುವ ಜನಪರ ಕಾಳಜಿಯ ಧುರೀಣ ಶ್ರೀ ಕೆ. ಚೆನ್ನಬಸಪ್ಪ ಕುಳಗೇರಿ ಅವರು.