Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಚಿ. ಶಂಕರ ರಾವ್‌

ವಿಶಿಷ್ಟ ವಿದ್ವತ್ತಿನ ವೇಣು ವಾದಕ, ಸಂಗೀತ ಸಾಧಕ ಬಿ.ಶಂಕರ ರಾವ್‌ ಅವರು.
೧೯೨೨ರಲ್ಲಿ ಬೆಂಗಳೂರಿನಲ್ಲಿ ಜನನ, ಸಂಗೀತ ಲೋಕದ ಈ ಕಾಯಕ ಜೀವಿಗೆ ಈಗ ೮೬ ಹರೆಯ. ಖ್ಯಾತ ಸಂಗೀತಗಾರರಾಗಿದ್ದ ಅಕ್ಕ ಬಾಲಾಂಬ ಮತ್ತು ಭಾವ ಶಿವರಾಮಯ್ಯನವರ ಪ್ರೋತ್ಸಾಹದಿಂದ ಚಿಕ್ಕ ವಯಸ್ಸಿನಲ್ಲೇ ಸಂಗೀತ ಲೋಕಕ್ಕೆ ಕಾಲಿಟ್ಟರು.
ಏಕಲವ್ಯ ಮಾದರಿಯಲ್ಲಿ ಸ್ವಯಂ ಸಂಗೀತ ಕಲಿಕೆ ಆರಂಭಿಸಿದ ರಾಯರು ಸತತ ಮೂರು ವರ್ಷ ಅಂತರ ವಿಶ್ವವಿದ್ಯಾಲಯ ಸಂಗೀತ ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು. ಸಂಗೀತ ಕ್ಷೇತ್ರದ ಮಹಾನ್ ಸಾಧಕ ಟಿ.ಆರ್.ಮಹಾಲಿಂಗಂ ಅವರ ಆತ್ಮೀಯ ವಲಯಕ್ಕೆ ೧೯೪೦ರಲ್ಲಿ ಸೇರ್ಪಡೆ. ಬಳಿಕ ಶ್ರೀಯುತರ ಸಂಗೀತ ಯಾನಕ್ಕೆ ಹೊಸ ತಿರುವು. ಮಹಾಲಿಂಗಂ ಅವರೊಂದಿಗಿನ ಸ್ನೇಹ-ನಂಟು ಅರ್ಧ ಶತಮಾನದ ಪರಿಧಿಯನ್ನು ದಾಟಿದ್ದು ಸಂಗೀತ ವಲಯದ ದಂತಕಥೆ. ೧೯೬೫ರಿಂದ ರಾಷ್ಟ್ರದಾದ್ಯಂತ ಶಂಕರರಾವ್‌ ಅವರು ನಡೆಸಿಕೊಟ್ಟಿರುವ ಸಂಗೀತ ಗೋಷ್ಠಿಗಳು ಹಲವು. ಶ್ರೀಯುತರ ಕೊಳಲು ವಾದನಕ್ಕೆ ಉಪರಾಷ್ಟ್ರಪತಿ ಬಿ.ಡಿ.ಜತ್ತಿಯವರಿಂದಲೂ ವಿಶೇಷ ಪ್ರಶಂಸೆ.
ಹಾಲೆಂಡ್ ಮತ್ತು ಜರ್ಮನಿವರೆಗೂ ಅವರ ಕೊಳಗಾನದ ಸವಿ ಸಂಚರಿಸಿದೆ. ಮ್ಯೂಸಿಕಲ್ ಥೆರಪಿ ಸಂಗೀತದಿಂದ ರಕ್ತದೊತ್ತಡ, ಆರ್ಥೈಟೀಸ್ ಹತೋಟಿ ಸಾಧ್ಯ ಎಂದು ಪ್ರಮಾಣಿಕರಿಸಿದ ಸಂಗೀತ ಸಾಧಕರು ಶ್ರೀಯುತರು.
ವೇಣು ವಾದನ ಕ್ಷೇತ್ರದಲ್ಲಿನ ಸಾಧನೆಗಾಗಿ ತಿರುಪತಿಯ ರಂಗನಾಥ ಸಭಾದಿಂದ ‘ವೇಣುಗಾನ ಗಂಧರ್ವ’, ಸಂದ ಶರ್ಮಾರಿಂದ ‘ಮುರಳಿ ಮೋಹಕ’ ಪ್ರಶಸ್ತಿಗಳು ಸಂದಿವೆ.
ಶ್ರೀ ಶಂಕರ ರಾವ್ ಅವರು ಸಂಯೋಜಿಸಿರುವ ಸ್ವರ ಸಂಗಮ, ಗಾನ-ರಾಗ-ಅಲಂಕಾರ, ಪಂಚರಂಜನಿ ರಾಗಗಳು ಸಂಗೀತ ವಲಯದಲ್ಲಿ ಜನಪ್ರಿಯ.