Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಡಿ. ಟಿ. ರಂಗಸ್ವಾಮಿ

ಚಿತ್ರದುರ್ಗ ಜಿಲ್ಲೆ ಹೊರಕೆರೆದೇವರಪುರದವರಾದ ಶ್ರೀ.ಡಿ.ಟಿ. ರಂಗಸ್ವಾಮಿಯವರು ಕನ್ನಡದಲ್ಲಿ ೫೦ ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ವಿಮರ್ಶೆ,ಜೀವನಚರಿತ್ರೆ, ನಾಟಕಗಳು, ಶಾಸ್ತ್ರ ಗ್ರಂಥಗಳು, ಪತ್ರಲೇಖನ ಕಲೆ, ಮಕ್ಕಳ ಸಾಹಿತ್ಯ ಇತ್ಯಾದಿ ಎಲ್ಲ ಪ್ರಕಾರಗಳಲ್ಲು ಕೃತಿ ರಚನೆ ಮಾಡಿದ್ದಾರೆ.
ಸಾವಿರಾರು
ಮೂಲತ: ಅಧ್ಯಾಪಕರಾದ ಪ್ರೊ.ಡಿ.ಟಿ. ರಂಗಸ್ವಾಮಿಯವರು ರೀಡರ್,ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಇವರು ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ೧೦ ನೇ ತರಗತಿ ಕನ್ನಡ ಪಠ್ಯಪುಸ್ತಕ ರಚನೆಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿಯೂ ಭಾಗವಹಿಸಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರರು ಎನಿಸಿಕೊಂಡಿದ್ದಾರೆ.
‘ಶ್ರೀ ರಂಗಬಿನ್ನಪ’ ಅಭಿನಂದನಾ ಗ್ರಂಥವು ಪ್ರೊ. ರಂಗಸ್ವಾಮಿಯವರ ಸಮಗ್ರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಗ್ರಂಥವಾಗಿದೆ.