Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸಂತ ಕುಮಾರ ಪಾಟೀಲ

ಉದ್ದಿಮೆದಾರ, ಚಲನಚಿತ್ರ ನಿರ್ಮಾಪಕ, ವಿತರಕ, ನಟರಾಗಿ ಪರಿಚಿತರಾದವರು ಬಸಂತ ಕುಮಾರ ಪಾಟೀಲ ಅವರು. ಬಾಗಲಕೋಟೆ ಜಿಲ್ಲೆಯ ಹುನಗುಂದದವರಾದ ಪಾಟೀಲರು ಚಿತ್ರರಂಗದಲ್ಲಿ ಹೆಸರು ಮಾಡುವ ಮುನ್ನ ಸಿಮೆಂಟ್ ತಯಾರಿಕಾ ರಂಗದಲ್ಲಿ ಯಶಸ್ಸು ಕಂಡವರು. ಸಿಮೆಂಟ್ ಪೈಪ್, ಕಂಬಗಳ ತಯಾರಿಕೆಯ ಮೂಲಕ ‘ವಿಜಾಪುರ ಸನ್ ಪೈಪ್’ ಉದ್ದಿಮೆ ಸ್ಥಾಪನೆ. ವಿಜಾಪುರ ನಗರಕ್ಕೆ ನೀರು ಸರಬರಾಜು ಕಲ್ಪಿಸುವ ಯೋಜನೆಯಡಿ ನಿರ್ವಹಿಸಿದ ಪಾತ್ರ ವಿಶಿಷ್ಟವಾದುದು.
ಪಾಟೀಲರು ನಿರ್ಮಿಸಿದ, ಗಿರೀಶ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು’ ಹಾಗೂ ‘ಗುಲಾಬಿ ಟಾಕೀಸ್’ ಚಿತ್ರಗಳಿಂದ ಕನ್ನಡಕ್ಕೆ ಅಂತಾರರಾಷ್ಟ್ರೀಯ ಮನ್ನಣೆ ಲಭಿಸಿದೆ.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಶ್ರೀ ಬಸಂತ ಕುಮಾರ ಪಾಟೀಲ್‌ರದು ಮಹಾತ್ಯಾಗ, ಮಾಂಗಲ್ಯಭಾಗ್ಯ, ಅನುರಾಗ ಬಂಧನದಂತಹ ಉತ್ತಮ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ.