Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಶ್ರೀನಿವಾಸ್ ಕಡವಿಗೆರೆ

ಕ್ಯಾಮೆರಾ ಕಲೆಯನ್ನು ಕಸುಬಾಗಿ ಸ್ವೀಕರಿಸಿ ಆ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಂಡವರು ಡಿ.ಶ್ರೀನಿವಾಸ್‌ ಕಡವಿಗೆರೆ
ಅವರು.
೧೯೬೬ರಲ್ಲಿ ಶ್ರೀಯುತರ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಬಳಿಕ ಕ್ಯಾಮೆರಾದ ಕಲೆಗಾರಿಕೆಯಲ್ಲಿ ನೈಮಣ್ಯತೆ ಸಂಪಾದನೆ. ಚಲನಚಿತ್ರ ಮತ್ತು ಧಾರಾವಾಹಿಗಳ ಕ್ಯಾಮೆರಾ ಸಹಾಯಕರಾಗಿ ಸೇರ್ಪಡೆ.
ತೋಟಗಾರಿಕೆ ಇಲಾಖೆಗಾಗಿ ನಿರ್ಮಿಸಲಾದ ಸಾಕ್ಷ್ಯಚಿತ್ರಕ್ಕೆ ಕ್ಯಾಮೆರಾ ಸಹಾಯಕರಾಗಿ ದುಡಿದಿರುವ ಶ್ರೀನಿವಾಸ್ ಅವರು ಆಹಾ ಬ್ರಹ್ಮಚಾರಿ, ಮುದ್ದಿನ ಮಾವ, ಶಿರಡಿ ಸಾಯಿಬಾಬಾ ಮತ್ತು ಪ್ರೇಮ ಸಿಂಹಾಸನ ಚಿತ್ರಗಳಿಗೂ ಕ್ಯಾಮೆರಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಥೆಗಾರ, ಮಾಯಾಮೃಗ, ದಶಾವತಾರ, ಅವಲೋಕನ, ಭಾಗ್ಯ, ಪುಣ್ಯ, ಮನೆಯೊಂದು ಮೂರು ಬಾಗಿಲು ಸೇರಿದಂತೆ ೧೫ಕ್ಕೂ ಹೆಚ್ಚು ಕಿರುತೆರೆಯ ಧಾರಾವಾಹಿಗಳಿಗೂ ಕ್ಯಾಮೆರಾ ಸಹಾಯಕರಾಗಿ ದುಡಿದಿರುವರು.
ಸಾವಿರಕ್ಕೂ ಹೆಚ್ಚಿನ ಕಂತುಗಳಲ್ಲಿ ಪ್ರಸಾರಗೊಂಡ ‘ವಠಾರ ಧಾರಾವಾಹಿಯ ಛಾಯಾಗ್ರಾಹಕರೂ ಆಗಿರುವ ಶ್ರೀನಿವಾಸ್ ಅ ಮೂಲಕ ‘ಸಾವಿರದ ಸರದಾರ’ರು ಕೀರ್ತಿಗೆ ಭಾಜನರು.
ಕ್ಯಾಮೆರಾವನ್ನು ಕಲ್ಪನೆಗೆ ಅನುಗುಣವಾಗಿ ದುಡಿಸಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಂಡಿರುವವರು ಶ್ರೀ ಡಿ.ಶ್ರೀನಿವಾಸ್ ಕಡವಿಗೆರೆ.