Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬೈಕಂಪಾಡಿ ರಾಮಚಂದ್ರ

ಮಂಗಳೂರಿನ ಮೀನುಗಾರರ ನಾಯಕ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಚೇರ್ಮನ್ ಆಗಿರುವ ಪಣಂಬೂರಿನ ಶ್ರೀ ಬೈಕಂಪಾಡಿ ರಾಮಚಂದ್ರ ಮೀನುಗಾರರ ಹಿತಕ್ಕಾಗಿ ಹೋರಾಟ ಮಾಡುತ್ತಿರುವವರು. ೧೯೮೯ ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕರಾದವರು. ೧೯೯೨ ರಲ್ಲಿ ವಿದೇಶಿ ಕಂಪನಿಗಳು ಸಾಗರದಲ್ಲಿ ಮಾಡುವ ಅಕ್ರಮ ಮೀನುಗಾರಿಕೆ ವಿರುದ್ಧ ೪೮ ದಿನಗಳ ಕಾಲ ಮತ್ಯ ಜಲ ಯಾತ್ರೆಯ ನಾಯಕತ್ವ ವಹಿಸಿ ನ್ಯಾಯ ಒದಗಿಸುವಲ್ಲಿ ಸಫಲರಾದವರು. ಸಮುದ್ರ ಮಾಲಿನ್ಯದ ವಿರುದ್ಧ ಹಲವಾರು ಬಾರಿ ಯಶಸ್ವಿ ಹೋರಾಟ ಮಾಡಿದ್ದಾರೆ.

ಇವರಿಗೆ ೨೦೨೧ ರಲ್ಲಿ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಲಭಿಸಿದೆ.