Categories
ಕ್ರೀಡೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಘವೇಂದ್ರ ರತ್ನಾಕರ ಅಣವೇಕರ್

ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಬೆಳಗಿದ ಸಾಧಕ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ರತ್ನಾಕರ ಅಣವೇಕರ್, ಏಷ್ಯನ್ ಕ್ರೀಡಾಕೂಟದ ಪದಕವಿಜೇತ ಈಜುಪಟು, ಬೆಳಗಾವಿ ಮೂಲದ ರಾಘವೇಂದ್ರ ರತ್ನಾಕರ ಬಾಲ್ಯದಲ್ಲೇ ಅಂಗವೈಕಲ್ಯಕ್ಕೊಳಗಾಗಿ ನಡೆದಾಡುವ ಭಾಗ್ಯ ಕಳೆದುಕೊಂಡರೂ ಏನಾದರೂ ಸಾಧಿಸುವ ಹುಮ್ಮಸ್ಸಿನಿಂದ ನೀರಿಗಿಳಿದವರು. ಈಜಿನಾಸಕ್ತಿಯನ್ನೇ ಸಾಧನೆಯ ಗಮ್ಯವಾಗಿಸಿಕೊಂಡವರು. ಕೋಚ್ ಉಮೇಶ್ ಕಲಘಟಗಿ ಅವರ ಗರಡಿಯಲ್ಲಿ ಈಜು ಪಟ್ಟುಗಳನ್ನು ಕರಗತ ಮಾಡಿಕೊಂಡು ಬೆಳಗಾವಿ ಈಜುಗಾರರ ಕ್ಲಬ್ ಪ್ರತಿನಿಧಿಯಾಗಿ ಕ್ರೀಡಾರಂಗಪ್ರವೇಶ. ೧೬ನೇ ವಯಸ್ಸಿಗೆ ೨೦೦೩ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂರು ಬಿಚ್ಚಿ, ಮೂರು ಕಂಚಿನ ಪದಕಗಳನ್ನು ಗೆದ್ದ ಬೆನ್ನಲ್ಲೆ ಕೌಲಲಾಂಪುರದಲ್ಲಿ ೨ ಕಂಚಿನ ಪದಕ, ೨೦೦೭ರಲ್ಲಿ ತೈವಾನ್‌ನಲ್ಲಿ ನಡೆದ ಅಂಗವಿಕಲರ ವಿಶ್ವ ಕ್ರೀಡಾಕೂಟದಲ್ಲೂ ೨ ಬೆಟ್ಟ, ೨ ಕಂಚಿನ ಪದಕಗಳ ಭೇಟಿ, ಮುಂದಿನದ್ದು ಯಶಸ್ವಿ ಕ್ರೀಡಾಯಾನ, ಪ್ಯಾರಾ ಏಷ್ಯನ್ ಕ್ರೀಡಾಕೂಟವನ್ನೊಳಗೊಂಡಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಐದು ಜನ್ಮ ೧೨ ಬೆಟ್ಟ, ೧೧ ಕಂಚು ಸೇರಿ ೨೮ ಪದಕ, ರಾಷ್ಟ್ರೀಯ ಮಟ್ಟದಲ್ಲಿ ೫೪ ಚಿನ್ನ ಸೇರಿ ೭೫ ಪದಕಗಳನ್ನು ಬಾಚಿಕೊಂಡಿರುವ, ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಮನಸ್ಸಿದ್ದರೆ ಮಾರ್ಗವುಂಟೆಂದು ನಿರೂಪಿಸಿರುವ ಸಾಧಕ.