Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ. ರಾಮಮೂರ್ತಿ

ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಅಪಾರ ಪರಿಣತಿ ಸಾಧಿಸಿರುವ ವಿಶೇಷವಾಗಿ, ಬೆಳಕಿನ ಸಂಯೋಜನೆಯಲ್ಲಿ ನಿಷ್ಣಾತರಾಗಿರುವ ಪ್ರತಿಭಾವಂತ ರಂಗಕರ್ಮಿ ಶ್ರೀ ವಿ. ರಾಮಮೂರ್ತಿ,
೧೯೩೫ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀ ರಾಮಮೂರ್ತಿ ಬಾಲ್ಯದಿಂದಲೂ ನಾಟಕದ ಕಡೆಗೆ ಒಲವು ಹೊಂದಿದವರು. ರಾಷ್ಟ್ರೀಯ ನಾಟಕ ಶಾಲೆಯಿಂದ ಸ್ನಾತಕೋತ್ತರ ಪದವಿ, ರಂಗನಿರ್ವಹಣೆ ಹಾಗೂ ನಿರ್ದೇಶನದಲ್ಲಿ ವಿಶೇಷ ಅಧ್ಯಯನ, ಎನ್.ಎಸ್.ಡಿ. ರೆಪರ್ಟರೀ, ಯಾತ್ರಿಕ್ ಥಿಯೇಟರ್ ಮತ್ತು ನಾಯಿಕಾ ರಂಗ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ೧೯೬೭ರಲ್ಲಿ ಹವಾಯಿ ವಿಶ್ವವಿದ್ಯಾಲಯದ ರಂಗವಿಭಾಗದಲ್ಲಿ ತರಬೇತಿ ಪಡೆದ ಅನಂತರ ೩ ವರ್ಷಗಳ ಕಾಲ ಬೆಳಕಿನ ಸಂಯೋಜನೆ ಹಾಗೂ ರಂಗ ತಂತ್ರಗಳ ಬಗೆಗೆ ವಿಶೇಷ ತರಬೇತಿ ಪಡೆದರು. ನ್ಯೂಯಾರ್ಕಿನ “ಕ್ಲಿಯೆಗಲ್ ಬ್ರದರ್ಸ್’ ಲೈಟಿಂಗ್ ಕಂಪನಿಯಲ್ಲಿ ಕೆಲಸಮಾಡಿ ಅನುಭವಗಳಿಸಿದರು.
ನಾಟಕ ನಿರ್ದೇಶಕ, ನಟ, ಮೈಮ್‌ಕಲಾವಿದ, ಸೆಟ್ಟಿಂಗ್ಸ್, ಪ್ರಸಾಧನ, ಬೆಳಕು ಸಂಯೋಜಕ ಹೀಗೆ ವಿವಿಧ ಆಯಾಮಗಳಲ್ಲಿ ಸುಮಾರು ೨೦೦ ಕ್ಕೂ ರಂಗ ನಿಲ್ದಾಣಗಳಲ್ಲಿ ದುಡಿಮೆ. ಭಾರತದ ಬೇರೆ ಬೇರೆ ಪ್ರದೇಶದ ಸುಮಾರು ೫೦ಕ್ಕೂ ಮಿಕ್ಕ ರಂಗ ಶಾಲೆಗಳಿಗೆ ಸಲಹೆಗಾರರಾಗಿ ಸೇವೆಸಲ್ಲಿಕೆ. ಅನೇಕ ವಿಶ್ವವಿದ್ಯಾಲಯಗಳ ರಂಗ ಮಂಟಪ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚಿಮನ್‌ಲಾಲ್ ಮೆಮೊರಿಯಲ್, ಪ್ರಶಸ್ತಿ, ಭಾರತೇಂದು ಅಕಾಡೆಮಿ ಪ್ರಶಸ್ತಿ ಎನ್.ಎಸ್.ಡಿ ಯ ಜೀವಮಾನದ ಸಾಧನೆ ಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಇವನ್ನು ಅರಸಿ ಬಂದಿವೆ. ಇಂದಿಗೂ ಚಟುವಟಿಕೆಯಿಂದಿರುವ ಕ್ರಿಯಾಶೀಲ ರಂಗತಜ್ಞ ಕನ್ನಡನಾಡಿನ ಹಿರಿಯ ನಿರ್ದೇಶಕರು ವಿ. ರಾಮಮೂರ್ತಿ.