Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ದಾದ ಫೀರ್ ಪಂಜರ್ಲೆ

ದಾದಾಪೀರ್ ಮಂಜರ್ಲಾ ಅವರು ತತ್ವಪದಗಳ ಮೂಲಕ ಭಾವೈಕ್ಯತೆ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಅದನ್ನು ವ್ಯಾಪಕವಾಗಿ ಪಸರಿಸುವ ಕೆಲಸದಲ್ಲಿ ಮಂಜರ್ಲಾ ಅವರು ನಿರತರಾಗಿದ್ದಾರೆ.

 

ಗಾಯನವನ್ನು ವಿಜಯಶಾಂತಿ ಫಿಲ್ಡ್ ಇನ್ಸಿಟ್ಯೂಟ್‌ನಿಂದ ಕಲಿತ ದಾದಾಪೀರ್ ಹಿಂದೂಸ್ಥಾನಿ ಗಾಯನವನ್ನು ಅಭ್ಯಾಸ ಮಾಡಿದ್ದು, ಹೆಸರಾಂತ ಹಿಂದೂಸ್ಥಾನಿ ಗಾಯಕ ಕಲ್ಕತ್ತೆಯ ಉಸ್ತಾದ್ ರಶೀದ್ ಖಾನ್ ಅವರಿಂದ ತತ್ವಪದ ಹಾಗೂ ಧಾರ್ಮಿಕ ಸಾಮರಸ್ಯ ಹರಡುವ ಸಂಗೀತವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ದಾದಾಪೀರ್ ಅವರು ಈವರೆಗೆ ನೂರಿಪ್ಪತ್ತೆಂಟು ತತ್ವಪದ ಹಾಗೂ ಧಾರ್ಮಿಕ ಪದಗಳ ಆಲ್ಬಂ ಹಾಗೂ ಕ್ಯಾಸೆಟ್ ಹೊರತಂದಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಉರ್ದು, ಮತ್ತು ಹಿಂದಿ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡುವ ದಾದಾಪೀರ್ ಮಂಜರ್ಲಾ ಪುರಂದರ ದಾಸರ, ಸಂತ ಶಿಶುನಾಳ ಷರೀಫರ ಕೃತಿಗಳನ್ನು ಮನದುಂಬಿ ಹಾಡುತ್ತಾರೆ.