Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಸ್ವಾಮಿ ಸಂಗಮೇಶ್ವರ ಹಿರೇಮಠ

ಸಮರ್ಥ ಹಿಂದೂಸ್ತಾನಿ ಸಂಗೀತ ಸಾಧಕ ಸ್ವಾಮಿ ಸಂಗಮೇಶ್ವರ ಹಿರೇಮಠ ಅವರು.
ಬಾಗಲಕೋಟೆ ಜಿಲ್ಲೆಯ ಮಧುರಖಂಡಿ ಗ್ರಾಮದಲ್ಲಿ ೧೯೩೦ರಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಆ ನಂತರ ಇಡೀ ಜೀವನ ಸಂಗೀತ ಸಾಧನೆಗೆ ಮುಡಿಪು. ಅವರ ತಾತನ ಕಾಲದಿಂದಲೂ ಬೆಳೆದು ಬಂದಿರುವ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು.
ಶ್ರೀ ಗಣಪತಿರಾವ್ ಗುರುವ ಜಮಖಂಡಿ ಅವರಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ. ೨೨ನೇ ವಯಸ್ಸಿಗೇ ಕಚೇರಿ ನೀಡಿದ ಹೆಗ್ಗಳಿಕೆ ಅವರದು. ತದನಂತರ ಮೃತ್ಯುಂಜಯ ಪುರಾಣಿಕ ಮಠ, ಪ್ರಭುದೇವ ಸರದಾರ, ಗುರುಬಸವಾರ್ಯ ಬ್ಯಾಡಗಿ ಅವರಿಂದ ಸಂಗೀತ ಕಲಿಯುವ ಕಾಯಕದ ಮುಂದುವರಿಕೆ. ಧಾರವಾಡದಲ್ಲಿ ಪಂಡಿತ ಬಸವರಾಜ ರಾಜಗುರು ಅವರ ಬಳಿ ಹತ್ತು ವರ್ಷ ಕಾಲ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತ ಜ್ಞಾನ ಸಂಪಾದನೆ.
ಧಾರವಾಡ ಆಕಾಶವಾಣಿ ಕೇಂದ್ರದಿಂದ ಹತ್ತಾರು ಬಾರಿ ಅವರ ಸಂಗೀತ ಕಾರ್ಯಕ್ರಮಗಳ ಪ್ರಸಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ತುಲಾಭಾರ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
ದೆಹಲಿ, ಮುಂಬೈ, ಪೂನಾ, ಬೆಂಗಳೂರು,ಗೋವಾ, ಮತ್ತಿತರ ಪ್ರದೇಶಗಳಲ್ಲಿ ಸಂಗೀತ ಕಛೇರಿ ನೀಡಿದ ಹಿರಿಮೆ ಶ್ರೀ ಸ್ವಾಮಿ ಸಂಗಮೇಶ ಹಿರೇಮಠ ಅವರದು.