Categories
ನಾಟಕಕಾರರು ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಬೇಲೂರು ಕೃಷ್ಣಮೂರ್ತಿ

ಕನ್ನಡದಲ್ಲಿ ಎಲ್ಲ ಪ್ರಕಾರದ ನಾಟಕಗಳನ್ನು ರಚಿಸಿರುವ ಬೇಲೂರು ಕೃಷ್ಣಮೂರ್ತಿಯವರು ಈವರೆಗೂ ಬರೆದಿರುವ ನಾಟಕಗಳು ನೂರಕ್ಕೂ ಹೆಚ್ಚು.

ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಹವ್ಯಾಸಿ ನಾಟಕಗಳಲ್ಲಿ ಹೆಸರು ಮಾಡಿರುವ ಕೃಷ್ಣಮೂರ್ತಿಯವರು ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸತ್ಯಕತೆಗಳನ್ನು ಆಧರಿಸಿ ಅನೇಕ ಸಂಕಲನಗಳನ್ನು ಹೊರತಂದಿರುವ ಇವರು ರೇಡಿಯೋ ನಾಟಕ ರಚನೆಯಲ್ಲಿಯೂ ನಿಪುಣರು.

ದಿವಂಗತ ಮುಸುರಿ ಕೃಷ್ಣಮೂರ್ತಿಯವರ ನಾಟಕ ಕಂಪನಿಯಲ್ಲಿ ಸಹ ನಟರಾಗಿಯೂ ಪಾತ್ರ ವಹಿಸಿರುವ ಬೇಲೂರು ಕೃಷ್ಣಮೂರ್ತಿಯವರು ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವಕ್ಕೂ ಪಾತ್ರರು.

ಕೃಷ್ಣಮೂರ್ತಿ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಹಲವು ಸಂಘಟನೆಗಳು ಗೌರವ ಸನ್ಮಾನಗಳನ್ನು ಮಾಡಿವೆ.