Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವಿಮರ್ಶೆ

ಕೆ.ವಿ. ಸುಬ್ರಮಣ್ಯಂ

ಕೆವಿಎಸ್ ಎಂದೇ ಗುರುತಿಸಲ್ಪಡುವ ಕೆ. ವಿಸುಬ್ರಮಣ್ಯಂ ನಾಡಿನ ಸುಪ್ರಸಿದ್ಧ ಕಲಾಚಿಂತಕರು, ಕುಂಚ-ಲೇಖನಿ ಎರಡರಿಂದಲೂ ಕಲಾವಲಯದಲ್ಲಿ ಹೆಸರು ಮಾಡಿರುವ ಸಾಧಕರು. ನಿರಂತರ ಶೋಧನೆ, ಪರಿಪೂರ್ಣ ಕಲಾವ್ಯಕ್ತಿತ್ವ ಕೆಎಎಸ್ ಅವರ ವೈಶಿಷ್ಟ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವಾಗಟ ಅಗ್ರಹಾರ ಸುಬ್ರಮಣ್ಯಂ ಅವರ ಮೂಲ ನೆಲೆ. ಬಾಲ್ಯದಲ್ಲೇ ಸಾಹಿತ್ಯ- ಕಲೆಯ ಬಗೆಗೆ ಆಸಕ್ತಿ. ಬಿ.ಎ, ಎ.ಸಿ.ಬಿ ಪದವೀಧರರು. ೧೯೬೯ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ. ಕಲಾಕೃತಿಗಳ ರಚನೆ, ಕಲಾವಿಮರ್ಶೆ ನೆಚ್ಚಿನ ಕಾರ್ಯಕ್ಷೇತ್ರ ಕರ್ನಾಟಕ ಚಿತ್ರಕಲಾ ಪರಿಷತ್ತು, ರಾಷ್ಟ್ರೀಯ ಕಲಾಮೇಳ ಮತ್ತಿತರೆಡೆ ಕಲಾಕೃತಿಗಳ ಪ್ರದರ್ಶನದಿಂದ ಮುಂಚೂಣಿಗೆ, ದೃಶ್ಯಕಲೆಯ ಕಲಾವಿಮರ್ಶಕರಾಗಿ ನಾಲ್ಕು ದಶಕಕ್ಕೂ ಮೀರಿದ ಅನನ್ಯ ಸೇವೆ. ವೆಂಕಟಪ್ಪ ಪುನರಾವಲೋಕನ, ದೃಶ್ಯಧ್ಯಾನ, ಲಲಿತಕಲೆಗಳು, ಆಧುನಿಕ ಶಿಲ್ಪಕಲೆ ಮುಂತಾದ ಮಹತ್ವದ ಕೃತಿಗಳ ರಚನಕಾರರು.ಜನಪ್ರಿಯ ಅಂಕಣಕಾರರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ, ಗೌರವ ಫೆಲೋಶಿಪ್, ಕಲಾಧ್ಯಾನ ಪುರಸ್ಕಾರಗಳಿಂದ ಭೂಷಿತರು.