Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಾಸನ ಅಧ್ಯಯನ

ಸೀತಾರಾಮ್ ಜಾಗೀರದಾ

ನಾಡಿನ ಹೆಸರಾಂತ ಶಾಸನ ತಜ್ಞರಲ್ಲಿ ಒಬ್ಬರಾದ ಸೀತಾರಾಮ್ ಜಾಗೀರದಾರ್ ಅವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಮೌಲ್ಯಯುತ ಶಾಸನ ಗ್ರಂಥಗಳನ್ನು ಹೊರತಂದವರು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಹಿರಿಯ ಶಾಸನ ತಜ್ಞರಾಗಿ ನಿವೃತ್ತರಾದ ಇವರು ಶ್ರವಣಬೆಳಗೊಳದ ಚಂದ್ರಗಿರಿಯ ಶಾಸನಗಳ ಅಧ್ಯಯನ ಯೋಜನೆಯ ಮುಖ್ಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದವರು.

ರಾಷ್ಟ್ರಕೂಟ ರಾಜವಂಶದಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಯ ಕುರಿತು ಆಳವಾದ ಅಧ್ಯಯನ ಮಾಡಿರುವ ಇವರು ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ದ ಬಗ್ಗೆ ವಿಶೇಷ ಉಪನ್ಯಾಸ, ಪುಸ್ತಕ ಪ್ರಕಟಣೆಗಳಲ್ಲಿ ಪಾಲುಗೊಂಡವರು.

ಅಲ್ಲಮ ಪ್ರಭುಗಳು, ಇಮ್ಮಡಿ ನಾಗವರ್ಮ, ವೀರಶೈವ ಸಾಹಿತ್ಯ ವಿಶೇಷ ಅಧ್ಯಯನ ಹೀಗೇ ಐವತ್ತಕ್ಕೂ ಹೆಚ್ಚು ಕನ್ನಡ ಹಾಗು ಇಂಗ್ಲಿಷ್ ಕೃತಿಗಳನ್ನು ರಚಿಸಿರುವ ಇವರು ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಶ್ರವಣಬೆಳಗೊಳದ ಶಾಸನ ಶಾಸ್ತ್ರ ವಿಶಾರದ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಇವರಿಗೆ ಲಭಿಸಿವೆ.