Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸೂತ್ರದ ಗೊಂಬೆ

ಎಂ.ಆರ್. ರಂಗನಾಥರಾವ್

ಸಾಂಪ್ರದಾಯಿಕ ಬೊಂಬೆಯಾಟದ ಕಲಾವಿದರ ಕುಟುಂಬ ವ್ಯಕ್ತಿಗಳಾದ ಎಂ.ಆ. ರಂಗನಾಥರಾವ್ ಬೊಂಬೆಯಾಟ ವಿಧಾನಗಳಲ್ಲಿ ವೈವಿಧ್ಯತೆಯನ್ನು ತರುವ ಮೂಲಕ ಹೊಸ ಪ್ರಯೋಗಗಳನ್ನು ತಂದವರು.
ರಂಗನಾಥ ರಾವ್ ಶಿಕ್ಷಣದಲ್ಲಿಯೂ ಬೊಂಬೆಯಾಟವನ್ನು ಅಳವಡಿಸುವಂತಹ ಹೊಸ ಪ್ರಯತ್ನಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು ಶಾಲಾ ಪಠ್ಯ ಕ್ರಮದಲ್ಲಿಯೂ ಇದನ್ನು ಸೇರಿಸಲಾಗಿದೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ರಾಯರು ದೇಶ-ವಿದೇಶಗಳ ಅನೇಕ ಬೊಂಬೆಯಾಟದ ಉತ್ಸವಗಳಲ್ಲಿ ಪಾಲುಗೊಂಡು ತಮ್ಮ ತಂಡದ ವತಿಯಿಂದ ಪ್ರದರ್ಶನಗಳನ್ನು ನೀಡಿದ್ದಾರೆ.