Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹವ್ಯಾಸಿ ರಂಗಭೂಮಿ

ಸಿ.ಕೆ. ಗುಂಡಣ್ಣ

ಆಧುನಿಕ ರಂಗಭೂಮಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಸಮುದಾಯ ತಂಡದ ಸಿ.ಕೆ.ಗುಂಡಣ್ಣ ನಟ, ನಿರ್ದೇಶಕ ಹಾಗೂ ರಂಗ ಸಂಘಟಕರಾಗಿ ಹೆಸರು ಮಾಡಿದರು.

ಬೀದಿ ನಾಟಕಗಳಿಂದ ತಮ್ಮ ಕಲಾಯಾತ್ರೆಯನ್ನು ಆರಂಭಿಸಿದ ಸಿ.ಕೆ.ಗುಂಡಣ್ಣ ಅನೇಕ ನಾಟಕಗಳಲ್ಲಿ ಪಾತ್ರಧಾರಿಯಾಗಿ, ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಪರಿಸರ ರಕ್ಷಣೆ, ಸಾಕ್ಷರತೆ, ವೈಜ್ಞಾನಿಕ ಮನೋಭಾವ ಇಂತಹ ಜನಮುಖಿ ವಿಚಾರಗಳ ಕುರಿತು ಸಮುದಾಯ ಸಂಘಟಿಸಿದ ನಾಟಕ, ಸಮಾವೇಶಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ಗುಂಡಣ್ಣ ಈಗಲೂ ನಾಟಕ ಚಟುವಟಿಕೆಗಳಲ್ಲಿ ಸಕ್ರಿಯರು.

ಪ್ರಸನ್ನ ಹಾಗೂ ಸಿಜಿಕೆ ಅವರುಗಳ ರಂಗ ಒಡನಾಡಿಯಾಗಿ ತಾಯಿ, ಕುಬಿ ಮತ್ತು ಇಯಾಲ, ದಂಗೆಯ ಮುಂಚಿನ ದಿನಗಳು, ಮೊದಲಾದ ನಾಟಕಗಳಿಗೆ ಕಲಾನಿರ್ದೇಶಕರಾಗಿ ರಂಗವಿನ್ಯಾಸವನ್ನು ಮಾಡಿದ್ದಾರೆ ಕಿರುತೆರೆಗಾಗಿ ಅನೇಕ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ಮತ್ತು ಕಿರುತೆರೆಯ ಮೂಲಕ ನಟರಾಗಿ ಕೂಡ ಅವರು ಈಗ ಜನಪ್ರಿಯರು.

ಗುಂಡಣ್ಣ ಅವರಿಗೆ ಪರಣ್ಣ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.