Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹಿರಿಯ ಕವಿಗಳು ಅನುವಾದಕರು

ಮಾಹೆರ್ ಮನ್ಸೂರ್

ಕನ್ನಡ, ಹಿಂದಿ ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವವಿರುವ ಮಾಹರ್ ಮನ್ಸೂರ್ ಅವರು ನಾಡಿನ ಪ್ರಖ್ಯಾತ ಉರ್ದು ಕವಿಗಳು ಮತ್ತು ಸಮರ್ಥ ಅನುವಾದಕರು. ಇವರ ಮೂಲ ಸಾಹಿತ್ಯ ಕೃತಿಗಳು ಮತ್ತು ಹಲವು ಕವಿಗಳ ಕಾವ್ಯ ಅನುವಾದಗಳು ಜನಮನ್ನಣೆ ಗಳಿಸಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನೆಯ ಪ್ರಶಸ್ತಿ, ಉರ್ದು ಅಕಾಡೆಮಿ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ಮಾಹೆರ್ ಮನ್ಸೂರ್ ಅವರ ಸಾಹಿತ್ಯ ಸಾಧನೆಯ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಉರ್ದು ವಿಭಾಗ ಪಿ.ಎಚ್.ಡಿ. ಅಧ್ಯಯನ ಸಹ ನಡೆಸಿದೆ. ಕುವೆಂಪು ಭಾಷಾ ಭಾರತಿ ಸಂಸ್ಥೆ ಮೂಲಕ ನಡೆಯುತ್ತಿರುವ ಉರ್ದು ಮತ್ತು ಕನ್ನಡದ ಶ್ರೇಷ್ಟ ಕೃತಿಗಳ ಅಂತರ್‌ ಅನುವಾದ ಯೋಜನೆಯಲ್ಲಿ ಇವರು ಮುಖ್ಯ ಸಂಪಾದಕರಾಗಿದ್ದಾರೆ.