Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಕಾವ್ಯ

ದುರಂತ

ಅವನೆ, ಅವನು ಲಿಂಗಾಯಿತ, ಇವನು
ಬ್ರಾಹ್ಮಣ, ಅವನೊಬ್ಬ ಒಕ್ಕಲಿಗ.
ಏನು? ಬೆಡ್ ನಂಬರ್ ಎಷ್ಟೆಂದು ಕೇಳಿದಿರ ?
ನಲವತ್ತೆಂಟು.

ಜೈಲಿನಲ್ಲಿ ಇವನೊಬ್ಬ ಖೈದಿ
ಅವನ ನಂಬರ್ ನನಗೆ ಗೊತ್ತಿಲ್ಲ ;
ಏ ಕೂಲಿ, ಬಾ ಇಲ್ಲಿ ಹೊತ್ತುಕೋ ಈ
ಪೆಟ್ಟಿಗೆಯನ್ನು ; ಬರೆದಿಟ್ಟುಕೋ ಇವನ
ನಂಬರ್ ಅನ್ನು, ಕಂಪ್ಲೇಂಟು ಕೊಡಲಿಕ್ಕೆ
ಬೇಕಾದೀತು.

ನಿಮ್ಮ ಟೋಕನ್ ನಂಬರ್ ಪ್ಲೀಸ್…..
ಮನಸ್ಸಿನಲ್ಲಿ ಕಸಿವಿಸಿ ; ಈ ‘ನಾನು’
ಎನ್ನುವುದು ಎಲ್ಲಿಗೆ ಬಂತು !

 

Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಕಾವ್ಯ

ಹಂಪೆಯಲ್ಲಿ

ಕೃತಿ – ಹಂಪೆಯಲ್ಲಿ

ಲೇಖಕರು – ಡಾ|| ಜಿ ಎಸ್ ಶಿವರುದ್ರಪ್ಪ

ಕೃತಿಯನ್ನು ಓದಿ     |     Download

Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಕಾವ್ಯ

ಅಂಧಕಾರ

ಅಂಧಕಾರ ಮುತ್ತುತಿದೆ
ಚಂದದ ಬೆಳಕಾರುತಿದೆ.

ಪಡುಗಡಲಿನ ನೀರಿನಲ್ಲಿ
ದಿನದ ವಿಭವವಳಿದಿದೆ
ಒಲವನೀವ ಬೆಳಕು ಹೋಗಿ
ಇರುಳು ತಿರೆಯ ತಬ್ಬಿದೆ.

ತೆರೆತೆರೆಗಳ ಕೆನ್ನೆಯಲ್ಲಿ
ಸಂಜೆಗೆಂಪುಮಾಯವಾಗಿ
ಕಸಿಯ ಛಾಯೆ ಸುಳಿದಿದೆ
ವಿರಹವೊಂದೆ ಬಲಿದಿದೆ.

ಹಕ್ಕಿಯುಲಿಗಳಡಗಿ ಹೋಗಿ
ಮರಗಳಲ್ಲಿ ಮಲಗಿವೆ
ತರಗೆಲೆಗಳು ಸರಸರವೆನೆ
ವಿಕಟನಾದಗೈದಿವೆ.

ಮೇಲೆ ನೀಲ ಬಾನ ಮೇಲೆ
ಕರಿಯ ಮುಗಿಲು ಮಾಲೆ ಮಾಲೆ
ಉರುಬಿ ತುರುಬಿ ನಿಂದಿದೆ
ಮನಕೆ ಭಯವ ಬಿತ್ತಿದೆ.
ಮೊರೆವ ಕಡಲ ತೆರೆಗಳಲ್ಲಿ
ಕಿರಿಯದೋಣಿ ನರಳಿದೆ ;
ಅಭಯವೀವ ತಾರೆಯೊಂದು
ಕಣ್ಗೆ ಕಾಣದಾಗಿದೆ.