Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಕೆ. ಪ್ರೇಮಾ

ಧರ್ಮ-ಸಾಹಿತ್ಯ-ಸಂಗೀತದ ಮೂಲಕ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಗೆ ಶ್ರಮಿಸಿದ ಸೇವಾಚೇತನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಬಹುಮುಖಿ ಆಸಕ್ತಿಯ ಬಹುಶ್ರುತ ಸಾಧಕಿ.
ಕೋಲಾರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಜನಿಸಿದ ಪ್ರೇಮಾ ಅವರು ಆಗಿನ ಕಾಲದಲ್ಲೇ ಎಲ್.ಎಸ್. ಪರೀಕ್ಷೆ ಪಾಸು ಮಾಡಿದ ವಿದ್ಯಾವಂತೆ, ಭಗವದ್ಗೀತೆ ಪಠಣದಲ್ಲಿ ಪ್ರಾವೀಣ್ಯತೆ, ಹದಿನೈದನೇ ವಯಸ್ಸಿನಿಂದಲೇ ಮಕ್ಕಳಿಗೆ ‘ಗೀತಾಪಾಠ’, ಪ್ರೇಮಾರದ್ದು ಸಾಹಿತ್ಯ, ಧರ್ಮ ಮತ್ತು ಸಂಗೀತದಿಂದ ಮುಪ್ಪರಿಗೊಂಡ ವ್ಯಕ್ತಿತ್ವ, ಗಾಯಕಿ, ಗಮಕಿ, ಆಶುಕವಿಯೂ ಸಹ, ಚಿಕ್ಕಮಗಳೂರಿನ ಕೋದಂಡರಾಮ ಶ್ರೇಷ್ಠ ಅವರೊಡನೆ ಮದುವೆಯಾದ ಬಳಿಕ ಸಮಾಜಸೇವಾ ಕಾರ್ಯದಲ್ಲಿ ಪೂರ್ಣ ತಲ್ಲೀನ. ಕಾಫಿನಾಡಲ್ಲಿ ಸಮೃದ್ಧ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ಪರಿಶ್ರಮ. ಪ್ರತಿ ವರ್ಷ ಗೀತಾಜ್ಞಾನ ಯಜ್ಞ ಆಯೋಜನೆ. ಸಾವಿರಾರು ಜನರಿಗೆ ಗೀತಬೋಧನೆ-ಗೀತಾ ಪುಸ್ತಕ ವಿತರಣೆ. ವಿದೇಶಗಳಲ್ಲೂ ಹಿಂದು ಧರ್ಮದ ಪ್ರಚಾರಕಾರ್ಯ. ರಾಜ್ಯಮಟ್ಟದ ಆರವೈಶ್ಯ ಮಹಿಳಾ ಸಮ್ಮೇಳನ ಆಯೋಜಿಸಿದ ಕೀರ್ತಿ. ಪರಮಾರ್ಥ ಕೃತಿಗಾರ್ತಿ, ಆರೂವರೆ ದಶಕಗಳಿಂದ ಆಧ್ಯಾತ್ಮ-ಗಾಯನ ಕ್ಷೇತ್ರದ ಕೃಷಿಯಲ್ಲಿ ನಿರತವಾಗಿರುವ ‘ಗುರುಭಕ್ತಿರತ್ನ’ ಬಿರುದಾಂಕಿತ ಸೇವಾಮೂರ್ತಿ.