Categories
ನ್ಯಾಯಾಂಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಂ.ಕೆ. ವಿಜಯಕುಮಾರ್

ನ್ಯಾಯಾಂಗ ನ್ಯಾಯಾಂಗ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಎಂ.ಕೆ. ವಿಜಯಕುಮಾರ್ ಪ್ರಮುಖರು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್. ಸಮಾಜಸೇವೆ, ಧಾರ್ಮಿಕ ಕ್ಷೇತ್ರಗಳಲ್ಲೂ ಕ್ರಿಯಾಶೀಲ ಸಾಧಕರು.
ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದವರಾದ ವಿಜಯಕುಮಾರ್ ವಿಜ್ಞಾನ ಕಾನೂನು ಪದವೀಧರರು. ೧೯೬೮ರಲ್ಲಿ ವಕೀಲಿ ವೃತ್ತಿ ಆರಂಭಿಸಿ ದೇಶದ ವಿವಿಧೆಡೆ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಕೃಷಿಕಾರ್ಮಿಕರು, ಹಳ್ಳಿಗರು, ಬಡವರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸಿದವರು. ಅಸಂಖ್ಯ ಸಾಮಾಜಿಕ, ಪರಿಸರಾತ್ಮಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ನ್ಯಾಯಾಂಗದಲ್ಲಿ ಎತ್ತಿಹಿಡಿದ ಹಿರಿಮೆ, ಕಾನೂನು ಉಪನ್ಯಾಸ, ನ್ಯಾಯವಾದಿಗಳ ಸಂಘಟನೆಯ ಆಡಳಿತದಲ್ಲಿ ದಕ್ಷತೆ ಮೆರೆದವರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನೊಳಗೊಂಡಂತೆ ೫೪ ಮಂದಿ ನ್ಯಾಯವಾದಿಗಳನ್ನು ರೂಪಿಸಿದ ಗುರು. ನ್ಯಾಯವಾದಿಯಾಗಿ ಐದು ದಶಕಕ್ಕೂ ಮೀರಿ ದುಡಿದ ಸೇವೆಯ ಹೆಗ್ಗುರುತು. ಅನೇಕ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ಕಾರ್ಯದಲ್ಲಿ ಸದಾ ಸಕ್ರಿಯರು. ಜನಪರ ನ್ಯಾಯವಾದಿಯೆಂದೇ ಜನಜನಿತರು.