Categories
ನ್ಯಾಯಾಂಗ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿದ್ದರಾಮೇಶ್ವರ ಕಂಟೀಕ

ದೇಶದಾದ್ಯಂತ ಗ್ರಾಹಕರ ವ್ಯಾಜ್ಯಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಶ್ರಮಿಸುತ್ತಿರುವ ಡಾ. ಸಿದ್ದರಾಮೇಶ್ವರ ಕಂಟೀಕ ದೊಡ್ಡ ಹೆಸರು. ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಭಾರತ ಸರ್ಕಾರದ ವತಿಯಿಂದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೈದ್ಯಕೀಯ ಓದಿಕೊಂಡಿದ್ದರೂ ನ್ಯಾಯಾಂಗ ವಿಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಗ್ರಾಹಕರ ವ್ಯಾಜ್ಯಗಳನ್ನು ಪರಿಹರಿಸಲು, ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Categories
ನ್ಯಾಯಾಂಗ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಕೆ. ವೆಂಕಟಾಚಲಪತಿ

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರತೆಯಿಂದ ಹೆಸರಾದವರು ಎಸ್.ಕೆ.ವೆಂಕಟಾಚಲಪತಿ. ಬಡಕಕ್ಷಿದಾರರ ಪಾಲಿನ ಆಪತ್ಬಾಂಧವರು. ಎಸ್.ಕೆ.ವೆಂಕಟಾಚಲಪತಿ ಅವರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು. ಬಹು ದಶಕಗಳಿಂದಲೂ ನ್ಯಾಯಾಂಗದಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವವರು. ಬಡವರು, ನಿರ್ಗತಿಕರು, ದೇವಸ್ಥಾನಗಳು ಮತ್ತು ಧಾರ್ಮಿಕ ಪ್ರಕರಣಗಳಲ್ಲಿ ಹಣ ಪಡೆಯದೇ ಉಚಿತವಾಗಿ ಕಾನೂನು ಸೇವೆಯಲ್ಲಿ ನೀಡುವ ಅಪರೂಪದ ವಿರಳಾತಿ ವಿರಳ ನ್ಯಾಯವಾದಿ. ಬೆಂಗಳೂರಿನಲ್ಲಿ ನೆಲೆನಿಂತಿರುವ ವೆಂಕಟಾಚಲಪತಿಗಳು ಎಂದಿಗೂ ಕಕ್ಷಿದಾರರಿಗೆ ಹೊರೆಯಾಗಿದ್ದಿಲ್ಲ. ಕಕ್ಷಿದಾರರ ಆರ್ಥಿಕ ಸ್ಥಿತಿಗನುಗುಣವಾಗಿ ಕಾನೂನು ಸೇವೆ ಒದಗಿಸುವುದು ಅವರ ಹೆಚ್ಚುಗಾರಿಕೆ ಹಾಗೂ ಹೃದಯ ವೈಶಾಲ್ಯತೆಗೆ ಸಾಕ್ಷಿ, ತಮ್ಮನ್ನು ಸಂಪರ್ಕಿಸುವ ಬಡವರಿಗೆ ಯಾವುದೇ ಹೊರೆಯಾಗದಂತೆ ಎಚ್ಚರವಹಿಸುವ ಅವರು ಉಚಿತ ಸೇವೆ ನೀಡುವುದರ ಜತೆಗೆ ಬದುಕಿನಲ್ಲಿ ಭರವಸೆಯನ್ನೂ ತುಂಬುವುದು ಬಲು ವಿಶಿಷ್ಟ. ನ್ಯಾಯಾಂಗದಲ್ಲಿ ಹಿರಿತನವುಳ್ಳ ವೆಂಕಟಾಚಲಪತಿ ಅವರು ನ್ಯಾಯದಾನ ವ್ಯವಸ್ಥೆಯ ಘನತೆ ಮತ್ತು ಅಂತಃಕರಣವನ್ನು ಹೆಚ್ಚಿಸಿದ ಅಪರೂಪದ ನ್ಯಾಯವಾದಿ.

Categories
ನ್ಯಾಯಾಂಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಕುಮಾರ್

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರ ನಿಲುವುಗಳಿಂದಲೇ ಹೆಸರುವಾಸಿಯಾದವರು ನ್ಯಾಯಮೂರ್ತಿಗಳಾದ ಎನ್. ಕುಮಾರ್, ವಕೀಲರು, ನ್ಯಾಯಾಧೀಶರು, ನ್ಯಾಯಾಂಗ ತರಬೇತುದಾರರಾಗಿ ಅನುಪಮ ಸೇವೆಗೈದ ಸಾಧಕರು.
ಪ್ರಸ್ತುತ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎನ್. ಕುಮಾರ್ ಅವರು ವಕೀಲಿ ವೃತ್ತಿ ಆರಂಭಿಸಿದ್ದು ೧೯೭೬ರಲ್ಲಿ. ವಕೀಲ ವ್ಯಾಸಂಗವನ್ನು ಆಳವಾಗಿ ಅಧ್ಯಯನಿಸಿದ ಅವರು ತಮ್ಮ ಅಭ್ಯಾಸವನ್ನು ಹೈಕೋರ್ಟ್‌ಗೆ ವಿಸ್ತರಿಸಿದರು. ಸಿವಿಲ್‌, ಕಂಪನಿ, ಕಾರ್ಮಿಕ, ತೆರಿಗೆ, ಐಪಿರ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ವಿಶೇಷ ಪರಿಣಿತಿ ಸಾಧಿಸಿದವರು. ಕರ್ನಾಟಕದ ಭಾರತೀಯ ಕಾನೂನು ವರದಿಗಳ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ೨೦೦೦ರಲ್ಲಿ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಹಲವು ಮಹತ್ವದ ಜನಪರ ತೀರ್ಪುಗಳ ಮೂಲಕ ಜನಾನುರಾಗಿಯಾದವರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ, ನ್ಯಾಯಾಂಗದ ಅಧಿಕಾರಿಗಳಿಗೆ ತರಬೇತುದಾರರಾಗಿಯೂ ಸೇವೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ನ್ಯಾಯಾಧೀಶರ ರೌಂಡ್ ಟೇಬಲ್ ಸಮ್ಮೇಳನಗಳಲ್ಲಿ ಉಪನ್ಯಾಸ-ಪ್ರಬಂಧಗಳ ಮಂಡನೆ ಮಾಡಿರುವ ನ್ಯಾಯಮೂರ್ತಿಗಳಿಗೆ ಅಲೈಯನ್ಸ್ ವಿ.ವಿ ಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಅನನ್ಯ ಸೇವೆಗೆ ಸಂದಿರುವ ಸತ್ಪಲ. ಸಧ್ಯ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಸೇವಾನಿರತರು.

Categories
ನ್ಯಾಯಾಂಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಂ.ಕೆ. ವಿಜಯಕುಮಾರ್

ನ್ಯಾಯಾಂಗ ನ್ಯಾಯಾಂಗ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಎಂ.ಕೆ. ವಿಜಯಕುಮಾರ್ ಪ್ರಮುಖರು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್. ಸಮಾಜಸೇವೆ, ಧಾರ್ಮಿಕ ಕ್ಷೇತ್ರಗಳಲ್ಲೂ ಕ್ರಿಯಾಶೀಲ ಸಾಧಕರು.
ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದವರಾದ ವಿಜಯಕುಮಾರ್ ವಿಜ್ಞಾನ ಕಾನೂನು ಪದವೀಧರರು. ೧೯೬೮ರಲ್ಲಿ ವಕೀಲಿ ವೃತ್ತಿ ಆರಂಭಿಸಿ ದೇಶದ ವಿವಿಧೆಡೆ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಕೃಷಿಕಾರ್ಮಿಕರು, ಹಳ್ಳಿಗರು, ಬಡವರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸಿದವರು. ಅಸಂಖ್ಯ ಸಾಮಾಜಿಕ, ಪರಿಸರಾತ್ಮಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ನ್ಯಾಯಾಂಗದಲ್ಲಿ ಎತ್ತಿಹಿಡಿದ ಹಿರಿಮೆ, ಕಾನೂನು ಉಪನ್ಯಾಸ, ನ್ಯಾಯವಾದಿಗಳ ಸಂಘಟನೆಯ ಆಡಳಿತದಲ್ಲಿ ದಕ್ಷತೆ ಮೆರೆದವರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನೊಳಗೊಂಡಂತೆ ೫೪ ಮಂದಿ ನ್ಯಾಯವಾದಿಗಳನ್ನು ರೂಪಿಸಿದ ಗುರು. ನ್ಯಾಯವಾದಿಯಾಗಿ ಐದು ದಶಕಕ್ಕೂ ಮೀರಿ ದುಡಿದ ಸೇವೆಯ ಹೆಗ್ಗುರುತು. ಅನೇಕ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ಕಾರ್ಯದಲ್ಲಿ ಸದಾ ಸಕ್ರಿಯರು. ಜನಪರ ನ್ಯಾಯವಾದಿಯೆಂದೇ ಜನಜನಿತರು.

Categories
ನ್ಯಾಯಾಂಗ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್.ಎಲ್.ದತ್ತು

ನ್ಯಾಯಾಂಗ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿಸಿದ ಕನ್ನಡಿಗರು ಎಚ್.ಎಲ್.ದತ್ತು. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹಿರಿಮೆಯ ಸಾಧಕರು.
ನ್ಯಾಯಾಂಗ ಕ್ಷೇತ್ರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಡುಗೆ ಎಚ್.ಎಲ್.ದತ್ತು. ಚಿಕ್ಕಮಗಳೂರಿನ ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಜನಿಸಿದ ದತ್ತು ಅವರ ತಂದೆ ಇಂಗ್ಲೀಷ್ ಶಿಕ್ಷಕರು. ಕಡೂರು, ತರೀಕೆರೆ ಮತ್ತು ಬೀರೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ದತ್ತು ಅವರು ೧೯೭೫ರಲ್ಲಿ ವಕೀಲರಾಗಿ ವೃತ್ತಿಬದುಕು ಆರಂಭಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ೮೩ರಿಂದ ೧೯೯೦ರವರೆಗೆ ಕಾರ್ಯನಿರ್ವಹಿಸಿದ ಅವರು ೯೦ರಿಂದ ೯೩ರವರೆಗೆ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ೧೯೯೫ರ ಡಿಸೆಂಬರ್ ೧೮ರಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ದತ್ತು ಅವರು ೨೦೦೭ರ ಫೆಬ್ರವರಿ ೧೨ರಂದು ಛತ್ತೀಸಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು. ಆನಂತರ ಕೇರಳ ಹೈಕೋರ್ಟ್ಗೆ ವರ್ಗಾವಣೆ. ೨೦೧೪ರಲ್ಲಿ ಪ್ರತಿಷ್ಠಿತ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಅತ್ಯುನ್ನತ ಹುದ್ದೆಗೆ ನೇಮಕಗೊಳ್ಳುವ ಮೂಲಕ ಕರುನಾಡಿಗೆ ಕೀರ್ತಿ ತಂದವರು. ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ದತ್ತು ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾನವೀಯ ನಡೆಗೆ ಹೆಸರಾದವರು. ರೋಟರಿಕ್ಲಬ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡವರು.

Categories
ನ್ಯಾಯಾಂಗ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್

ಬೆಂಗಳೂರಿನಲ್ಲಿ ವಕೀಲಿವೃತ್ತಿ ನಡೆಸುತ್ತಿದ್ದು ನಂತರ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾಗಿ ನಿವೃತ್ತರಾದರು. ಪ್ರಸ್ತುತ ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾಗಿರುವ ನಾಗಮೋಹನದಾಸ್ ಸಂವಿಧಾನ ವಿಚಾರಗಳ ಬಗ್ಗೆ ಅಪಾರ ಜ್ಞಾನವುಳ್ಳವರು.

ನ್ಯಾಯಾಂಗ ಹಾಗೂ ಸಂವಿಧಾನದ ಬಗ್ಗೆ ಹಲವಾರು ಮೌಲ್ಯಯುತ ಕೃತಿಗಳನ್ನು ರಚಿಸಿರುವ ಶ್ರೀಯುತರು ಕರ್ನಾಟಕ ಸರ್ಕಾರದ ಹಲವು ಸಂವಿಧಾನಾತ್ಮಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ಸರ್ಕಾರದ ‘ಗಾಂಧಿ ಸೇವ’ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಟಿ.ಎಸ್.ರಾಮಚಂದ್ರರಾವ್ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನಾಗಮೋಹನದಾಸ್ ಅವರು ಕಾರ್ಯ ನಿರ್ವಹಿಸಿದ್ದಾರೆ.

Categories
ನ್ಯಾಯಾಂಗ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ನ್ಯಾ. ಶಿವರಾಜ ಪಾಟೀಲ

ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರು ೨೨ನೇ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಜೊತೆಗೆ ಕಲ್ಬುರ್ಗಿಯ ಸೇಠ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಗೌರವ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯಾಯಾಂಗ ವೃತ್ತಿಯಲ್ಲಿ ಕಾಯಕ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸಿದ ಶಿವರಾಜ ಪಾಟೀಲ್ ರಾಜ್ಯದ ಹಲವಾರು ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
೧೯೭೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶಿವರಾಜ ಪಾಟೀಲರು ನಂತರ ತಮಿಳುನಾಡು ಹಾಗೂ ರಾಜಸ್ಥಾನ ಹೈಕೋರ್ಟ್ಗಳ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ಇಲಾಖೆಯ ಘನತೆ,

Categories
ನ್ಯಾಯಾಂಗ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎನ್. ನಂಜುಂಡ ರೆಡ್ಡಿ

ನ್ಯಾಯಾಂಗದಲ್ಲಿ ಸಮಾಜಪರ ನಿಲುವುಗಳಿಂದ ವಿಶಿಷ್ಟ ಛಾಪೊತ್ತಿದವರು ನಂಜುಂಡರೆಡ್ಡಿ, ನಾಲ್ಕು ದಶಕಗಳಿಂದಲೂ ಕಕ್ಷಿದಾರರ ಹಿತ ಕಾಯುತ್ತಿರುವ ನ್ಯಾಯವಾದಿ, ನ್ಯಾಯಾಂಗ ವಲಯದಲ್ಲಿ ನಂಜುಂಡರೆಡ್ಡಿ ಅವರದ್ದು ಬಲು ಜನಪ್ರಿಯ ಹೆಸರು. ಅಸೀಮ ವೃತ್ತಿಪರತೆ, ಜ್ಞಾನ ನಂಜುಂಡರೆಡ್ಡಿ ಅವರ ವಿಶೇಷತೆ, ಕ್ಲಿಷ್ಟಕರವಾದ ಪ್ರಕರಣಗಳಲ್ಲಿ ಅತ್ಯಂತ ಜಾಣ್ಮೆಯಿಂದ ವಾದಿಸಿ ಕಕ್ಷಿದಾರರಿಗೆ ಗೆಲುವನ್ನು ತಂದುಕೊಡುವಲ್ಲಿ ಅವರು ಸದಾ ಯಶಸ್ವಿ. ಸಮಾಜದ ಉನ್ನತಿಗೆ ಶ್ರಮಿಸುವುದೇ ಬದುಕಿನ ಮೂಲಧ್ಯೇಯ. ವಕೀಲವಲಯಲ್ಲಿ ಹಣಕ್ಕಿಂತಲೂ ಸಮಾಜಮುಖಿತ್ವ ಮುಖ್ಯವೆಂಬ ದಿವ್ಯ ನಂಬಿಕೆಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಹಲವಾರು ಪ್ರಕರಣಗಳಲ್ಲಿ ವಾದಿಸಿ ಮಂಡಿಸಿದವರು. ಬಿಬಿಎಂಪಿ ಮತ್ತು ಬಿಡಿಎಯಿಂದ ಕೈತಪ್ಪುವಂತಿದ್ದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ನೂರಾರು ಎಕರೆ ಭೂಮಿಯನ್ನು ಮರಳಿ ವಾಪಸ್‌ ಪಡೆದುಕೊಟ್ಟ ಅಪೂರ್ವ ಸಾಧನೆ-ಸೇವೆ. ನಂಜುಂಡರೆಡ್ಡಿ ಅವರ ಈ ವೃತ್ತಿಕುಶಲತೆಯಿಂದಾಗಿ ಸರ್ಕಾರಕ್ಕೆ ಪರೋಕ್ಷವಾಗಿ ಜನತೆಗೆ ಆದ ಲಾಭ ಅಗಣಿತ. ವೃತ್ತಿಪರತೆ ಮತ್ತು ವೃತ್ತಿಬದ್ಧತೆಗಳ ಮಹಾಸಂಗಮದಂತಿರುವ ನಂಜುಂಡರೆಡ್ಡಿ ನ್ಯಾಯಾಂಗದಲ್ಲಿ ಕಂಡುಬರುವ ಅಪರೂಪದ ಸಮಾಜಪರ ನ್ಯಾಯವಾದಿ.